ನೆಲ್ಯಾಡಿ ರಾಮನಗರ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ

0

ನೆಲ್ಯಾಡಿ: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಪರವಾಗಿ ನೆಲ್ಯಾಡಿ ಗ್ರಾಮದ ರಾಮನಗರ ವಾರ್ಡ್‌ನಲ್ಲಿ ಮತಯಾಚನೆ ಮಾಡಲಾಯಿತು.


ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಕಡಬ ಬ್ಲಾಕ್‌ನ ಸೇವಾದಳದ ಅಧ್ಯಕ್ಷರೂ ಆದ ಗಂಗಾಧರ ಶೆಟ್ಟಿ ಹೊಸಮನೆಯವರ ನೇತೃತ್ವದಲ್ಲಿ ಮನೆ ಮನೆ ಭೇಟಿ ನೀಡಿ ಬಿರುಸಿನ ಮತಯಾಚನೆ ಮಾಡಲಾಯಿತು. ಕಾಂಗ್ರೆಸ್ ಪಕ್ಷದ ಮುಖಂಡ ಸೀತಾರಾಮ ಕಾನಮನೆಯವರು ಕಾಂಗ್ರೆಸ್ ಪಕ್ಷದ ಭರವಸೆ ಹಾಗೂ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಪಕ್ಷದ ಕಾರ್ಯಕರ್ತರಾದ ಚಾಕೋ, ಮೋನಪ್ಪ ರಾಮನಗರ, ಮತ್ತಡಿ ಕೋಡಿಡ್ಕ, ಚಿಕ್ಕಣ್ಣ ಗೌಡ, ಸಂತೋಷ್ ರಾಮನಗರ, ಸೋಮಪ್ಪ ರಾಮನಗರ, ಮಂಚ ಮುಗೇರ, ಮಾರ್ಷಲ್ ಡಿ ಸೋಜಾ, ಹೆರಾಲ್ಡ್ ಡಿಸೋಜಾ ಸಹಿತ ಅನೇಕ ಕಾರ್ಯಕರ್ತರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here