ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರೀ ಕೊರಗ ತನಿಯ ದೈವದ ಹರಕೆ ನೇಮೋತ್ಸವ

0

ಬಡಗನ್ನೂರುಃ ಸುಳ್ಯಪದವು ಶಬರಿನಗರ  ಶ್ರೀ ಸ್ವಾಮಿ ಕೊರಗಜ್ಜ ದೈವ ಕ್ಷೇತ್ರದಲ್ಲಿ ಕಿರಣ್ ಪುತ್ತೂರು ಇವರ ಹರಕೆಯ ಶ್ರೀ ಕೊರಗತನಿಯ ದೈವದ  ನೇಮೋತ್ಸವ ಅದ್ದೂರಿಯಾಗಿ ಏ 27 ರಂದು ನಡೆಯಿತು.

ಸಂಜೆ 7 ಕ್ಕೆ ಶ್ರೀ ದೈವದ ಭಂಡಾರ ತೆಗೆದು ಬಳಿಕ  ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂ 8 ರಿಂದ ಶ್ರೀ ಕೊರಗ ತನಿಯ ದೈವದ ನೇಮೋತ್ಸವ ಬಳಿಕ ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ  ಹರಕೆ ಸೇವಾಕರ್ತರಾದ ಕಿರಣ್ ಪುತ್ತೂರು ಹಾಗೂ ಮನೆಯವರು, ಹಾಗೂ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಉಪಾಧ್ಯಕ್ಷ ಸದಾನಂದ ರೈ ಬೋಳಂಗೂಡ್ಲು, ಕೋಶಾಧಿಕಾರಿ ಭಾಸ್ಕರ ಹೆಗ್ಗಡೆ ಶಬರಿನಗರ, ಜೊತೆ ಕಾರ್ಯದರ್ಶಿ ವಿನಾಯ ಕುಮಾರ್ ದೇವಸ್ಯ, ಪೂಜಾ ಕರ್ಮಿ  ಮಾಧವ ಸಾಲಿಯಾನ್, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊರ್ಕರ್ ಮತ್ತು ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು. 

ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು. 

LEAVE A REPLY

Please enter your comment!
Please enter your name here