ಕುಂಡಾಜೆ: ಚಲಿಸುತ್ತಿದ್ದ ಬೋಲೆರಾ ಮೇಲೆ ಬಿದ್ದ ಮರದ ರೆಂಬೆ

0

ಆಲಂಕಾರು: ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯ ಕುಂಡಾಜೆ ಸೇತುವೆ ಬಳಿ ಮರದ ರೆಂಬೆವೂಂದು ಮುರಿದು ಚಲಿಸುತ್ತಿರುವ ಬೋಲೆರಾದ ಮೇಲೆ ಬಿದ್ದಿದೆ.ಇದರಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಆದರೆ ಯಾವುದೇ ಅನಾಹುತ ಸಂಭವಿಸದೆ ಬೋಲೆರಾ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.


ರಾಜ್ಯ ಹೆದ್ದಾರಿ ಬದಿಯಲ್ಲಿ ರಸ್ತೆಗೆ ಬಾಗಿನಿಂತ ಹಲವು ಅಪಾಯಕಾರಿ ಮರಗಳಿದ್ದರೂ ಇದರ ತೆರವಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಗಮನ ಹರಿಸದಿರುವ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸಂಬಂಧ ಪಟ್ಟವರು ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here