ಕೊಡಿಪ್ಪಾಡಿಯ ಕಲ್ಲಂದಡ್ಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಸಭೆ

0

ಪುತ್ತೂರು : ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಪರ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು ಕಲ್ಲಂದಡ್ಕದಲ್ಲಿ ಸಮಸ್ಯೆಗಳ ಬಗ್ಗೆ ಯಾರೂ ಗಮನಹರಿಸದೆ ಇದ್ದು ಕುಡಿಯುವ ನೀರು, ರಸ್ತೆಯ ಸಮಸ್ಯೆ ಪರಿಹರಿಸಿಕೊಡುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಬೆಂಬಲಿಸಿ ಎಂದು ಗ್ರಾಮಸ್ಥರಲ್ಲಿ‌ ಮನವಿ ಮಾಡಿದ ರೈಗಳು ಮುಂದೆ ಎಲ್ಲಾ ಸಮಸ್ಯೆಗಳಿಗೂ ಕಾಂಗ್ರೆಸ್ ಪರಿಹಾರ ಕಾಣಿಸಲಿದೆ ಎಂದು ಭರವಸೆ ನೀಡಿದರು. ಕಾವು ಹೇಮನಾಥ ಶೆಟ್ಟಿ,ಶಕುಂತಳಾ ಶೆಟ್ಟಿ, ಡಾ.‌ರಾಜಾರಾಂ ಕೆ ಬಿ, ಎಂ‌ಎಸ್ ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here