ವಿಟ್ಲದಲ್ಲಿ”ಆಪ್‌” ಭರ್ಜರಿ ಪ್ರಚಾರ

0

ಪುತ್ತೂರು: ಭ್ರಷ್ಟಾಚಾರ ರಹಿತವಾಗಿ ದೇಶದ ದೆಹಲಿ ಮತ್ತು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಆಡಳಿತ ನಡೆಸುತ್ತಿದ್ದು, ಜನಸಾಮಾನ್ಯರ ಬದುಕಿನಲ್ಲಿ ಸಹಾಯವಾಗಬಲ್ಲ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ರಾಜ್ಯದಲ್ಲಿ ಆಪ್ ಆಡಳಿತ ಬಂದಲ್ಲಿ ಜನಸಾಮಾನ್ಯರಿಗೆ ಸೌಲಭ್ಯಗಳ ಮಹಾಪೂರಕವೇ ಹರಿದು ಬರಲಿದೆ ಎಂದು ಪುತ್ತೂರು ಕ್ಷೇತ್ರದ ಅಭ್ಯರ್ಥಿ ಡಾ.ವಿಶುಕುಮಾರ್ ಹೇಳಿದ್ದಾರೆ. ವಿ‌ಟ್ಲದಲ್ಲಿ ನಡೆದ ಪಕ್ಷದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು ಪಕ್ಷದ ವತಿಯಿಂದ ಭರವಸೆ ನೀಡಿದ್ದು, ವಿಟ್ಲದ ಅಲ್ಲಲ್ಲಿ ಬಿರುಸಿನ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here