ಮೇ. 28 ಕೊಕ್ಕಡದಲ್ಲಿ ಜೇಸಿ ವಲಯ 15ರ ವಲಯಾಡಳಿತ ಸಭೆ

0

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ಆತಿಥ್ಯದಲ್ಲಿ ಜೇಸಿ ವಲಯ 15 ಇದರ ವಲಯಾಡಳಿತ ಸಮಿತಿ ಸಭೆಯು ಇದೇ ಮೇ. 28 ರಂದು ನಡೆಯಲಿದೆ.

ನಿಡ್ಲೆ ಬಳಿ ಆನಂದ ರೆಸಾರ್ಟ್ ಇದರಲ್ಲಿ ಜರುಗುವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಸುಮಾರು ನಲುವತ್ತು ಮಂದಿ ಜೇಸಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವಲಯಾಧ್ಯಕ್ಷ ಶ್ರೀ ಪುರುಷೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಲಯದ ಪೂರ್ವಾಧ್ಯಕ್ಷರಾದ ಶ್ರೀ ಸಂತೋಷ್ ಜಿ. ಅವರು ಸಮಾರಂಭವನ್ನು ಉದ್ಘಾಟಿಸುವರು. ವಲಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ರಾಯನ್ ಉದಯ ಕ್ರಾಸ್ತಾ, ಹಾಗೂ ಅಧಿಕಾರಿಗಳು ಉಪಸ್ಥಿತರಿರುವರು.

ಕೊಕ್ಕಡ ಘಟಕವು ಇದೇ ಮೊದಲ ಬಾರಿಗೆ ವಲಯ ಮಟ್ಟದ ಸಮಾರಂಭದ ಆತಿಥ್ಯವನ್ನು ವಹಿಸಲಿದೆ ಎಂದು ಘಟಕಾಧ್ಯಕ್ಷರಾದ ಶ್ರೀ ಶ್ರೀ ಜಿತೇಶ್ ಎಲ್ ಪಿರೇರಾ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here