ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾ| ಯೋಜನಾಧಿಕಾರಿಯಾಗಿ ಶಶಿಧರ್ ಎಮ್., ಆನಂದ ಕೆ. ಧರ್ಮಸ್ಥಳ ಕೇಂದ್ರ ಕಚೇರಿಗೆ ವರ್ಗ

0

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ತಾಲೂಕಿನ ನೂತನ ಯೋಜನಾಧಿಕಾರಿಯಾಗಿ ಶಶಿಧರ್ ಎಮ್.ರವರು ವರ್ಗಾವಣೆಗೊಂಡು ಆಗಮಿಸಿದ್ದಾರೆ. ಹಿಂದಿನ ಯೋಜನಾಧಿಕಾರಿ ಆನಂದ ಕೆ.ರವರು ಜವಾಬ್ದಾರಿ ಹಸ್ತಾಂತರಿಸಿದರು. ತಾಲೂಕಿನಲ್ಲಿ 2 ವರ್ಷ ಸೇವೆ ನೀಡಿದ ಆನಂದಕೆ.ರವರು ಯೋಜನೆಯ ಆದೇಶದಂತೆ ಧರ್ಮಸ್ಥಳ ಕೇಂದ್ರ ಕಛೇರಿಯ ಗುಂಪು ಲೆಕ್ಕಪರಿಶೋಧನಾ ವಿಭಾಗಕ್ಕೆ ಯೋಜನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಶಶಿಧರ್ ಎಮ್.ರವರು ಮೂಲತ: ಬೆಳ್ತಂಗಡಿ ತಾಲೂಕಿನ ಬಂಗಾಡಿಯವರಾಗಿದ್ದು, ಯೋಜನೆಯಲ್ಲಿ 18 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮೈಸೂರು ಜಿಲ್ಲೆ, ಎಚ್‌ಡಿ ಕೋಟೆ ತಾಲೂಕಿನಲ್ಲಿ ಯೋಜನಾಧಿಕಾರಿಯಾಗಿದ್ದರು.

ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಹೆಗ್ಡೆ ಉರ್ಲಾಂಡಿ, ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಮಹಾಬಲ ರೈ, ಹಾಗೂ ಕೇಂದ್ರ ಒಕ್ಕೂಟ ಅಧ್ಯಕ್ಷ ಉದಯ್ ಕುಮಾರ್‌ರವರು ಶಶಿಧರ್‌ರವರ ಅಧಿಕಾರ ಸ್ವೀಕಾರ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here