ಪ್ರಥಮ ಪಿಯುಸಿ ಐದು ವಿಷಯಗಳಲ್ಲಿ ಅನುತ್ತೀರ್ಣರಾದವರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ; ಪ್ರಗತಿ ಸ್ಟಡಿ ಸೆಂಟರ್‌ನಿಂದ ಹೊಸ ಮೈಲಿಗಲ್ಲು

0

ಪುತ್ತೂರು: ಹೊಸಮಜಲು ಗ್ರಾಮದ ಜಗದೀಶ್ ಎ ಜೆ ಹಾಗೂ ರಮಾದೇವಿ ಇವರ ಮಗಳಾದ ನಂದನ ಜೆ ಇವರು ಪ್ರಥಮ ಪಿ.ಯು.ಸಿ ಯಲ್ಲಿ 5 ವಿಷಯದಲ್ಲಿ ಅನುತ್ತೀರ್ಣರಾಗಿದ್ದು ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಟ್ಯೂಷನ್ ಪಡೆದುಕೊಂಡು ಅರ್ಥಶಾಸ್ತ್ರ-56, ವ್ಯವಹಾರ ಅಧ್ಯಯನ-40, ಕನ್ನಡ-38, ಲೆಕ್ಕಶಾಸ್ತ್ರ-55, ರಾಜ್ಯಶಾಸ್ತ್ರ-43 ಅಂಕಗಳೊಂದಿಗೆ ತೆರ್ಗಡೆಗೊಂಡಿರುತ್ತಾರೆ. ಇನ್ನೋರ್ವ ವಿದ್ಯಾರ್ಥಿನಿಯಾದ ಮಾನ್ಯ ಇವರು ಬೆಳ್ತಂಗಡಿಯ ಸ್ಯಾಂಥೊಮ್ ಟವರ‍್ಸ್‌ನಲ್ಲಿ ಕಾರ್ಯನಿರ್ವಹಿಸುತಿರುವ ಪ್ರಗತಿ ಸ್ಟಡಿ ಸೆಂಟರ್‌ನ ಸಹ ಸಂಸ್ಥೆಯಾದ ಸುದ್ಧಿ ಮಾಹಿತಿ ಟ್ರಸ್ಟ್ ಇದರ ಪ್ರಾಯೋಜಕತ್ವದ ಅರಿವು ಸಂಸ್ಥೆಯಲ್ಲಿ, ಪ್ರಥಮ ಪಿ.ಯು.ಸಿ.ಯಲ್ಲಿ ಅನುತ್ತೀರ್ಣಗೊಂಡ ವಿಷಯಗಳಿಗೆ ಟ್ಯೂಷನ್ ಪಡೆದುಕೊಂಡು ಉತ್ತಮ ಅಂಕಗಳೊಂದಿಗೆ ತೆರ್ಗಡೆಗೊಂಡಿರುತ್ತಾರೆ. ಇವರು ಶಿವಮೊಗ್ಗ ಜಿಲ್ಲೆಯ ಹನುಮಂತಪ್ಪ ಎಸ್ ಹಾಗೂ ಶಿಲ್ಪ ಟಿ ಇವರ ಪುತ್ರಿಯಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕುಲ್ ನಾಥ್ ಅವರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here