ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದ ತರಬೇತುದಾರರಾಗಿ ಜೇಸಿಐ ಪೂರ್ವಾಧ್ಯಕ್ಷ ದಾಮೋದರ ಪಾಟಾಳಿ

0

ಪುತ್ತೂರು: ಜೇಸಿಐ ಕಲ್ಯಾಣಪುರ ಮತ್ತು ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಇವರ ಅಶ್ರಯದಲ್ಲಿ ನಡೆದ ಇಪ್ಪತ್ತೈದು ಗಂಟೆಗಳ ಟ್ರೈನಿಂಗ್ ಮ್ಯಾರಥಾನ್ ಇಂಡಿಯಾ ಬುಕ್ ಅಪ್ ರೆಕಾರ್ಡ್ ದಾಖಲೆಗಾಗಿ ನಡೆದ ತರಬೇತಿ ಕಾರ್ಯಗಾರದಲ್ಲಿ ಜೇಸಿಐ ವಲಯ ತರಬೇತುದಾರರಾದ ದಾಮೋದರ ಪಾಟಾಳಿಯವರು ತರಬೇತುದಾರರಾಗಿ ಬಾಗವಹಿಸಿದರು.


ತರಬೇತಿ ಕಾರ್ಯಗಾರವನ್ನು ಜೇಸಿಐ ಭಾರತದ ವಲಯ ಹದಿನೈದರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಉದ್ಘಾಟಿಸಿದರು. ದಾಮೋದರ ಪಾಟಾಳಿಯವರು ತಳಮಟ್ಟದಿಂದ ಬಂದು ತನ್ನ ಪರಿಶ್ರಮದ ಫಲವಾಗಿ ಇಂದು ಒಬ್ಬ ಒಳ್ಳೆಯ ಬಹು ಬೇಡಿಕೆಯ ತರಬೇತುದಾರರಾಗಿ ಮೂಡಿ ಬಂದಿರುತ್ತಾರೆ. ಜೇಸಿಐ ಪುತ್ತೂರಿನ ಪೂರ್ವಾಧ್ಯಕ್ಷರಾದ ಇವರು ವಲಯದಲ್ಲಿ ಉತ್ತಮ ಕಾರ್ಯನಿರ್ವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಜೇಸಿಐ ಭಾರತದ ರಾಷ್ಟೀಯ ಸಂಯೋಜಕರಾಗಿಯೂ ಇವರು ಕಾರ್ಯನಿರ್ವಹಿಸಿರುತ್ತಾರೆ.

LEAVE A REPLY

Please enter your comment!
Please enter your name here