ಕೋಲಾಡಿಯಲ್ಲಿ ‘ಶಾಂತಿ ನಿವಾಸ’ ಗೃಹಪ್ರವೇಶ, ಗಣಪತಿ ಹೋಮ, ಸತ್ಯನಾರಾಯಣ ಪೂಜೆ

0

ಪುತ್ತೂರು: ನರಿಮೊಗರು ಗ್ರಾಮದ ಕೋಲಾಡಿಯಲ್ಲಿ ಶಾಂತಪ್ಪ ವೆಂಕಪ್ಪ ಕರ್ಕೇರಾ ಮತ್ತು ಶ್ರೀಮತಿ ಅರುಣಾ ದಿನೇಶ್ ಕರ್ಕೇರಾರವರು ನಿರ್ಮಿಸಲ್ಪಟ್ಟ ನೂತನ ಶಾಂತಿ ನಿವಾಸ ಇದರ ಗೃಹಪ್ರವೇಶ, ಗಣಪತಿ ಹೋಮ ಮತ್ತು ಸತ್ಯನಾರಾಯಣ ಪೂಜೆಯು ಮೇ 24 ರಂದು ಜರಗಿತು.


ಅರ್ಚಕರಾದ ವೇದಮೂರ್ತಿ ಶ್ರೀವತ್ಸ ಕೆದಿಲಾಯರವರು ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು‌. ಅದೇ ದಿನ ರಾತ್ರಿ ಕಲ್ಲುರ್ಟಿ ದೈವದ ನೇಮ ಜರಗಿತು. ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಜಯರಾಮ ಕೆದಿಲಾಯ ಶಿಬರ ಹಾಗೂ ಶಿಕ್ಷಕರು, ಕರ್ಕೇರ ಕುಟುಂಬ ಸದಸ್ಯರು, ಹಿತೈಷಿಗಳು, ನಾಗರಿಕರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here