ಚಿಕ್ಕಮುಡ್ನೂರು: ಗೃಹಪ್ರವೇಶದ ಎರಡೇ ದಿನದಲ್ಲಿ ಯಜಮಾನ ಆತ್ಮಹತ್ಯೆ

0

ಪುತ್ತೂರು:ಗೃಹಪ್ರವೇಶದ ಎರಡೇ ದಿನದಲ್ಲಿ ಯಜಮಾನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮುಡ್ನೂರು ಗ್ರಾಮದ ಬೀರ‍್ನಹಿತ್ಲು ಎಂಬಲ್ಲಿ ಮೇ 29ರಂದು ನಡೆದ ಬಗ್ಗೆ ವರದಿಯಾಗಿದೆ.

ಬೀರ‍್ನಹಿತ್ಲು ನಿವಾಸಿ ಪುಷ್ಪ ಎಂಬವರ ಗಂಡ ವಿಜಯ ಕುಮಾರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಅವರ ಮನೆಯ ಹಿಂದುಗಡೆಯ ಶೆಡ್‌ನ ಮೇಲ್ಛಾವಣಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಲುಂಗಿಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 27ರಂದು ಪುಷ್ಪ ಅವರ ಮನೆಯ ಗೃಹಪ್ರವೇಶ ನಡೆದಿತ್ತು. ಮೇ 28ರಂದು ಅವರ ಗಂಡ ಸಂಜೆ ಮನೆಯಲ್ಲಿದ್ದವರು ಅಮಲು ಪದಾರ್ಥ ಸೇವಿಸಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಗಲಾಟೆ ಮಾಡಿ ಮೈದುನನ ಮನೆಗೆ ಹೋಗಿದ್ದರು. ಅಲ್ಲಿಂದ ರಾತ್ರಿ ಮನೆಗೆ ಹಿಂದಿರುಗಿದ ಅವರು ಮನೆಯ ಹಿಂಬದಿಯ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 29ರಂದು ವಿಜಯ ಕುಮಾರ್ ಅವರ ಪತ್ನಿ ಪುಷ್ಪಾ ಅವರು ಶೆಡ್‌ನ ಬಾಗಿಲನ್ನು ತೆರೆದು ನೋಡಿದಾಗ ಗಂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here