ಮಿತ್ತೂರು: ರಸ್ತೆ ಬದಿಯ ತಡೆಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು-ಚಾಲಕ ಅಪಾಯದಿಂದ ಪಾರು

0

ಪುತ್ತೂರು:ಮಂಗಳೂರುನಿಂದ ಪುತ್ತೂರಿಗೆ ಪುಸ್ತಕಗಳನ್ನು ಸಾಗಿಸಲಾಗುತ್ತಿದ್ದ ರೆನಾಲ್ಟ್ ಕ್ವಿಡ್ ಕಾರೊಂದು ಮಿತ್ತೂರು ಬಳಿ ರಸ್ತೆ ಬದಿಯ ತಡೆ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಜೂ.1ರಂದು ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದೆ.

ಘಟನೆಯಿಂದ ಕಾರಿಗೆ ಹಾನಿಯಾಗಿದೆ.ಕಾರಲ್ಲಿ ಚಾಲಕರೋರ್ವರೇ ಇದ್ದು ಅಪಾಯದಿಂದ ಪಾರಾಗಿದ್ದಾರೆ.ಮಂಗಳೂರುನಿಂದ ವಿವೇಕಾನಂದ ಪ್ರೌಢಶಾಲೆಗೆ ಪುಸ್ತಕಗಳನ್ನು ಈ ಕಾರಿನಲ್ಲಿ ತರಲಾಗುತ್ತಿತ್ತು ಎಂದು ತಿಳಿದು ಬಂದಿದೆ.ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

https://puttur.suddinews.com/wp-content/uploads/2023/06/WhatsApp-Video-2023-06-01-at-7.04.04-PM-1.mp4

LEAVE A REPLY

Please enter your comment!
Please enter your name here