ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ, ಅನ್ಯಾನ್ಯ ಸಂಘಗಳ ವಾರ್ಷಿಕೋತ್ಸವದ ಅಂಗವಾಗಿ ಸತ್ಯದತ್ತ ವ್ರತ ಪೂಜೆ

0

ನಂಬಿಕೆ ವಿಶ್ವಾಸದಿಂದ ಬದುಕು‌ ಸಾರ್ಥಕ – ಒಡಿಯೂರು ಶ್ರೀ

ಪುತ್ತೂರು: ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ, ವಜ್ರಮಾತ , ಗ್ರಾಮವಿಕಾಸ, ಒಡಿಯೂರು ವಿವಿದ್ದೋದ್ದೇಶ ಸಹಕಾರ ಸಂಘದ ವತಿಯಿಂದ 16 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಸತ್ಯದತ್ತ ವ್ರತ ಪೂಜೆ, ನಡೆಯಿತು.


ಬೆಳಿಗ್ಗೆ ಭಜನೆ, ಮದ್ಯಾಹ್ನ ಶ್ರೀ ಸತ್ಯದತ್ತ ವ್ರತ ಪೂಜೆಯ ಮಹಾಮಂಗಳಾರತಿ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನಾ ನೀಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಹಿಂದು ಸಂಘಟನೆಗಳ ಮುಕಂಡ ಅರುಣ್ ಕುಮಾರ್ ಪುತ್ತಿಲ, ಒಡಿಯೂರು, ಒಡಿಯೂರು ವಿವಿಧ್ದೋದೇಶ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ರೈ ಎಂ ಜೆ , ಒಡಿಯೂರು ಗ್ರಾಮ ಯೋಜನೆಯ ಯೋಜನಾಧಿಕಾರಿ ಕಿರಣ್ ಉರ್ವ, ಒಡಿಯೂರು ವಜ್ರಮಾತಾ ಭಜನಾ ಮಂಡಳಿ ಅಧ್ಯಕ್ಷೆ ನಯನಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ ಸೀರಾರಾಮ ರೈ ಸವಣೂರು, ದ ಕ ಹಾಲು ಉತ್ಪಾದಕ ಸಂಘದ ಉಪಾಧ್ಯಕ್ಷ ಎಸ್ ಬಿ ಜಯರಾಮ ರೈ ಬಳಜ್ಜ, ಪದ್ಮನಾಭ ಶೆಟ್ಟಿ, ಯು ಲೋಕೇಶ್ ಹೆಗ್ಡೆ, ಭಾಸ್ಕರ ಬಾರ್ಯ, ರಮೇಶ್ ರೈ ಡಿಂಬ್ರಿ ಸಹಿತ ಹಲವಾರು ಮಂದಿ ಪೂಜಾ ಕಾರ್ಯದಲ್ಲಿ ಭಾಗಿಯಾದಗಿದ್ದರು. ಗುರುದೇವಾ ಸೇವಾ ಬಳಗದ ಕಾರ್ಯದರ್ಶಿ ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಮತ್ತು ಒಡಿಯೂರು ವಜ್ರ‌ಮಾತಾ ಮಹಿಳಾ ಘಟಕದ ಕಾರ್ಯದರ್ಶಿ ಶಾರದಾಕೇಶವ್ ವಾರ್ಷಿಕ ವರದಿ ವಾಚಿಸಿದರು. ಸಭೆಯಲ್ಲಿ ಕವಯತ್ರಿ ಶಾಂತ ಕುಂಟಿನಿ ಪ್ರಾರ್ಥಿಸಿದರು. ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡಾ ಸ್ವಾಗತಿಸಿದರು. ಜಯಪ್ರಕಾಶ್ ರೈ, ಮೋನಪ್ಪ ಪೂಜಾರಿ, ವಿಶ್ವನಾಥ ಶೆಟ್ಟಿ, ಭವಾನಿಶಂಕರ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.

LEAVE A REPLY

Please enter your comment!
Please enter your name here