ದರ್ಬೆತ್ತಡ್ಕ- ಮರದ ಗೆಲ್ಲು ಬಿದ್ದು ಮೃತ್ಯು

0

ಪುತ್ತೂರು: ಪುತ್ತೂರು ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದ ಗೆಲ್ಲೊಂದು ಮೈಮೇಲೆ ಬಿದ್ದ ಪರಿಣಾಮ ಓರ್ವ ಮೃತಪಟ್ಟ ಘಟನೆ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಎಂಬಲ್ಲಿ ನಡೆದಿದೆ.

ದರ್ಬೆತ್ತಡ್ಕ ನಿವಾಸಿ ಗುರುಪ್ರಸಾದ್( 49 ವ) ರವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜೂನ್ 8ರಂದು ಸಂಜೆ ಗುರುಪ್ರಸಾದ್ ರವರು ತಮ್ಮ ಜಮೀನಿನಲ್ಲಿ ಮರದ ಗೆಲ್ಲನ್ನು ಕಡಿಸುತ್ತಿದ್ದ ವೇಳೆ ಇವರು ಹಗ್ಗದಿಂದ ಮರದ ಗೆಲ್ಲನ್ನು ಕೆಳಗೆ ನಿಂತು ಎಳೆಯುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಗೆಲ್ಲು ಇವರ ಮೈ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಇವರನ್ನು ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೂಯ್ಯಲಾಯಿತಾದರು ಚಿಕಿತ್ಸೆ ಫಲಕರಿಯಾಗದೆ ಮೃತಪಟ್ಟರು ಎನ್ನಲಾಗಿದೆ.

ಮೃತರ ಮನೆಗೆ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು,, ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಸಹಿತ, ಗ್ರಾ.ಪಂ ಸದಸ್ಯರು ಸೇರಿದಂತೆ ಹಲವು ಮಂದಿ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಮೃತರು ದರ್ಬೆತ್ತಡ್ಕ ಅಂಗನವಾಡಿ ಕಾರ್ಯಕರ್ತೆ ಪತ್ನಿ ಇಂದಿರಾ ಮಕ್ಕಳಾದ ದಿವಿಶ್ ಮತ್ತು ದೀಪಕ್ ರವರನ್ನು ಅಗಲಿದ್ದಾರೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here