ದಿ.ಪದ್ಮಾವತಿ ಮತ್ತು ದಿ.ನಾರಾಯಣಗೌಡ ಸ್ಮರಣಾರ್ಥ ಎಕ್ಕಡ್ಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಣೆ

0

ಪುತ್ತೂರು: ದಿ. ಶ್ರೀಮತಿ ಪದ್ಮಾವತಿ ಮತ್ತು ದಿ. ಶ್ರೀ ನಾರಾಯಣಗೌಡ ಕೊಚ್ಚಿ ಅವರ ಸ್ಮರಣಾರ್ಥವಾಗಿ ಸ.ಕಿ.ಪ್ರಾ. ಶಾಲೆ ಎಕ್ಕಡ್ಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಜೂ.10ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ವಿನಯ್ ಕುಮಾರ್ ವಹಿಸಿದ್ದರು. 1ರಿಂದ 5ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸುಮಾರು 20,000 ರೂ. ಮೌಲ್ಯದ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದಾನಿಗಳಾದ ಕೊಳ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಯತೀಂದ್ರ ಕೊಚ್ಚಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮ್ ಸುಂದರ್ ರೈ ಕೆರೆಮೂಲೆ ಮತ್ತು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಸದಸ್ಯ ವಸಂತಕುಮಾರ್ ರೈ ದುಗ್ಗಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here