ನಾಳೆ (ಜೂ.12) ಕೆ.ಆರ್ ಆಚಾರ್ಯರ ವಕೀಲರ ಕಛೇರಿ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಇಲ್ಲಿನ ಬಿಜೆಪಿ ಕಛೇರಿ ಬಳಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆರ್.ಆಚಾರ್ಯರವರ ವಕೀಲರ ಕಛೇರಿ ಸ್ಥಳಾಂತರಗೊಂಡು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಹಿಂಭಾಗದಲ್ಲಿರುವ ಕೆ.ಆರ್.ಆಚಾರ್ಯ ಕೌಂಪೌಂಡ್‌ನಲ್ಲಿ ಜೂ.12ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ. ಪದ್ಮಾ ಕೆ.ಆರ್.ಆಚಾರ್ಯರವರು ದೀಪ ಪ್ರಜ್ವಲನೆ ಮಾಡಲಿದ್ದು, ಉದ್ಯಮಿ ಕುಂಜಾರು ವಾಸುದೇವ ಆಚಾರ್ಯ ಗೌರವ ಉಪಸ್ಥಿತಿಯಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಶುಭಾಶಂಸನೆ ಮಾಡಲಿದ್ದಾರೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿ ಪ್ರೋತ್ಸಾಹ ನೀಡುವಂತೆ ವಕೀಲರುಗಳಾದ ಕೆ.ಆರ್.ಆಚಾರ್ಯ, ಶಶಿಧರ ಬಿ.ಎನ್, ವಿನಾಯಕ ರಾಮ್ ಜಿ.ಪಿ, ದಿನಮಣಿ ಎನ್.ಭಟ್‌ರವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here