ಕುತೂಹಲಕ್ಕೆ ಕಾರಣವಾದ ಕ್ಯಾ.ಬ್ರಿಜೇಶ್‌ ಚೌಟ ಕಡಬ ಭೇಟಿ

0

ಪುತ್ತೂರು: ಸಂಸದ ನಳಿನ್‌ ಕುಮಾರ್‌ ಕಟೀಲ್‌ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಟೀಲ್‌ ಅವರಿಗೆ ಟಿಕೇಟ್‌ ಸಿಗಲ್ಲ, ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಮುಂದಿನ ಲೋಕಾಸಭಾ ಅಭ್ಯರ್ಥಿ ಎಂಬ ಊಹಾಪೋಹ ಮತ್ತು ಗಾಳಿ ಸುದ್ದಿಗಳಿಗೆ ಬಲ ತುಂಬುವಂತೆ ಜೂ.15 ರಂದು ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಸಾರ್ವಜನಿಕವಾಗಿ ಫೀಲ್ಡಿಗಿಳಿದಿದ್ದಾರೆ.

ಕಡಬ ತಾಲೂಕಿನ ಮರ್ದಾಳ ಮಹತ್ತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮಾತುಕತೆ ನಡೆಸಿದ್ದಾರೆ. ಶಿಲಾಮಯವಾಗಿ ಜೀರ್ಣೋದ್ದಾರಕ್ಕೆ ಅಣಿಗೊಳ್ಳುತ್ತಿರುವ ದೇವಲಾಯಕ್ಕೆ ಬೇಟಿ ನೀಡಿದ ನಿವೃತ್ತ ಸೇನಾನಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಭೇಟಿ ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here