ನೆಲ್ಯಾಡಿಯ ಗೌರವ್, ಸಮೃದ್ಧ್ ನವೋದಯ ವಿದ್ಯಾಲಯಕ್ಕೆ ಆಯ್ಕೆ

0

ನೆಲ್ಯಾಡಿ: ಇಲ್ಲಿನ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡ ಗೌರವ್ ಜಿ.ಎಮ್. ಹಾಗೂ ಸಮೃದ್ಧ್‌ರವರು ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಗೊಂಡಿದ್ದಾರೆ.
ನೆಲ್ಯಾಡಿ ಸಮೀಪದ ಮಕ್ಕಿಗದ್ದೆ ನಿವಾಸಿ ಗೋಪಾಲ ಗೌಡ ಹಾಗೂ ಶ್ರೀಮತಿ ವಿನಯರವರ ಮಗ ಗೌರವ್ ಜಿ.ಎಮ್ ಮತ್ತು ಬಾಲಕೃಷ್ಣ ಗೌಡ ಹಾಗೂ ಶ್ರೀಮತಿ ತಾರಾದೇವಿ ಅವರ ಮಗ ಸಮೃದ್ಧ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.

ಇವರಿಬ್ಬರು ನೆಲ್ಯಾಡಿ ಜ್ಞಾನೋದಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ 2023-24ನೇ ಸಾಲಿನ ನವೋದಯ ಆರನೇ ತರಗತಿ ಪ್ರವೇಶ ಪರೀಕ್ಷೆಯು ನಡೆದಿತ್ತು. ಗೌರವ್ ಜಿ.ಎಮ್.ಹಾಗೂ ಸಮೃದ್ಧ್‌ರವರು ನೆಲ್ಯಾಡಿ ಐಐಸಿಟಿ ವಿದ್ಯಾಕೇಂದ್ರದಲ್ಲಿ ತರಬೇತಿ ಪಡೆದುಕೊಂಡು ಪರೀಕ್ಷೆ ಬರೆದಿದ್ದರು. ನೆಲ್ಯಾಡಿಯಲ್ಲಿ ಕಳೆದ 14 ವರುಷಗಳಿಂದ ಕಾರ್ಯಾಚರಿಸುತ್ತಿರುವ ಐಐಸಿಟಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಟ್ಯೂಷನ್, ನವೋದಯ ಕೋಚಿಂಗ್, ಅಬಾಕಸ್ ಇತ್ಯಾದಿ ತರಬೇತಿ ನೀಡುತ್ತಾ ಬರುತ್ತಿದೆ. ಇಲ್ಲಿ 2024-25ನೇ ಸಾಲಿನ ನವೋದಯ ಕೋಚಿಂಗ್ ಆರಂಭಗೊಂಡಿದ್ದು ಸೇರ ಬಯಸುವ ಆಸಕ್ತ ವಿದ್ಯಾರ್ಥಿಗಳು 9448409912 ನಂಬರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here