ಮಾಣಿಲ ಗ್ರಾ.ಪಂಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ

0

ಲಂಚ, ಭ್ರಷ್ಟಾಚಾರವಿಲ್ಲದೆ ಗ್ರಾ.ಪಂ ಸ್ವಚ್ಚ ಸೇವೆಯನ್ನು ಮಾಡಬೇಕು
ಪುತ್ತೂರು: ಮಾಣಿಲ ಗ್ರಾ.ಪಂಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಜೂ. 28 ರಂದು ಭೇಟಿ ನೀಡಿದರು. ಗ್ರಾಪಂ ಕಚೇರಿಯಲ್ಲಿ ಸಿಬ್ಬಂದಿಗಳು ಶಾಸಕರನ್ನು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಶಾಸಕರು ಗ್ರಾಪಂ ನಲ್ಲಿ ಉತ್ತಮ ಸೇವೆಯನ್ನು ನೀಡಬೇಕು, ಬಡವರನ್ನು ಸತಾಯಿಸಬಾರದು, ಬಡವರು ಕಚೇರಿಗೆ ಬಂದರೆ ಅವರ ಕೆಲಸಗಳನ್ನು ಆದಷ್ಟು ಬೇಗ ಮಾಡಿಕೊಡಬೇಕು. ಲಂಚ, ಭ್ರಷ್ಟಾಚಾರವಿಲ್ಲದೆ ಸ್ವಚ್ಚ ಗ್ರಾ.ಪಂ ಆಗಿ ಮುಂದುವರೆಯಬೇಕು ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ವನಿತಾ ಉಪಸ್ಥಿತರಿದ್ದರು. ಪಿಡಿಒ ವಸಂತಿ ಸ್ವಾಗತಿಸಿದರು. ಕಾರ್ಯದರ್ಶಿ ರಾಮನಾಯ್ಕ ಎಂ ವಂದಿಸಿದರು.

LEAVE A REPLY

Please enter your comment!
Please enter your name here