ಕಾಣಿಯೂರು: ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಕೈತೋಟ ನಿರ್ಮಾಣಕ್ಕೆ ಜು1ರಂದು ಚಾಲನೆ ನೀಡಲಾಯಿತು.
ಮಕ್ಕಳಿಗೆ ಬಾಲ್ಯದಲ್ಲಿಯೇ ಕೃಷಿ ಚಟುವಟಿಕೆಯ ಅನುಭವ ಮತ್ತು ಆಸಕ್ತಿ ಸಿಗುವ ನಿಟ್ಟಿನಲ್ಲಿ ಶಾಲಾ ಶಿಕ್ಷಕಿಯರ ಸಹಾಯದಿಂದ ಮಕ್ಕಳು ವಿವಿಧ ತಳಿಯ, ವಿವಿಧ ತರಕಾರಿಗಳ ಬೀಜಗಳನ್ನು ಆಯ್ದು ತಂದು ಶಾಲಾ ಆವರಣದಲ್ಲಿ ಒಂದು ಸುಸಜ್ಜಿತವಾದ ಕೈತೋಟವನ್ನು ನಿರ್ಮಾಣ ಮಾಡಬೇಕೆಂಬ ಹಂಬಲದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರು. ಈ ಸಂದರ್ಭದಲ್ಲಿ ಶಾಲಾ ಹಿರಿಯ ಶಿಕ್ಷಕಿ ಹೇಮ ನಾಗೇಶ್ ರೈ, ಶಿಕ್ಷಕಿಯರಾದ ವೀಣಲತಾ, ವಿಮಲ ಸಹಕರಿಸಿದರು.
![](https://puttur.suddinews.com/wp-content/uploads/2023/07/9ac623bd-7960-41d4-bccf-a01e32fd63f4.jpg)