ಪುತ್ತೂರು: ಸೆ.10ರಂದು ಬೆಂಗಳೂರಿನಲ್ಲಿ ನಡೆಯುವ ಎಸ್ಎಸ್ಎಫ್ ಗೋಲ್ಡನ್ ಫಿಫ್ಟಿ ಪ್ರಯುಕ್ತ ಪುತ್ತೂರು ಮತ್ತು ಕಬಕ ಸೆಕ್ಟರ್ ಜಂಟಿಯಾಗಿ ರೋಟರಿ ಕ್ಯಾಂಪ್ಕೋ ರಕ್ತನಿಧಿ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ನಡೆಯಿತು.
ಕೆಎಮ್ಜೆ ನಾಯಕ ಇಕ್ಬಾಲ್ ಬಪ್ಪಳಿಗೆ, ಎಸ್ವೈಎಸ್ ನಾಯಕ ಅಬ್ದುಲ್ ರಝಾಕ್ ಖಾಸಿಮಿ, ಅಬೂಬಕ್ಕರ್ ಪುರುಷರಕಟ್ಟೆ, ಎಸ್ಎಸ್ಎಫ್ ನಾಯಕರಾದ ಶಿಹಾಬುರ್ರಹ್ಮಾನ್ ಹಸನ್ ನಗರ, ಕರೀಂ ಬಾಹಸನಿ,ಹಾರಿಸ್ ಸಖಾಫಿ, ಸಲಾಂ ಹನೀಫೀ,ಸಿನಾನ್ ಸಖಾಫಿ, ನೌಶಾದ್ ಸಖಾಫಿ,ರಫೀಕ್ ಕೆಮ್ಮಾಯಿ ಇನ್ನಿತರ ಹಲವಾರು ಸಂಘಟನಾ ಕಾರ್ಯಕರ್ತರು ಉಪಸ್ಥಿತರಿದ್ದರು.
