ಆಲಂಕಾರು: ಅರಣ್ಯ ಇಲಾಖೆ ಹಾಗು ಗ್ರಾಮ ಪಂಚಾಯತ್ ಮತ್ತು ಶೌರ್ಯ ತಂಡದ ವತಿಯಿಂದ ವನ ಮಹೋತ್ಸವ

0

ಆಲಂಕಾರು: ಅರಣ್ಯ ಇಲಾಖೆ ಮಂಗಳೂರು,ಸುಬ್ರಹ್ಮಣ್ಯ ಉಪವಿಭಾಗ,ಪಂಜ ವಲಯ,ಕುಂತೂರು ಶಾಖೆ,ಆಲಂಕಾರು ಗ್ರಾಮ ಪಂಚಾಯತ್, ಶೌರ್ಯ ತಂಡದ ವತಿಯಿಂದ ಆಲಂಕಾರಿನಲ್ಲಿ ವಿವಿಧ ಬಗೆಯ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಆಚಾರ್ಯ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಉಪವಲಯ ಅರಣ್ಯ ಅಧಿಕಾರಿ ಜಯಕುಮಾರ್,ವನಮಹೋತ್ಸವದ ಮಹತ್ವ ತಿಳಿಸಿ ಸ್ವಾಗತಿಸಿ, ವಂದಿಸಿದರು.ಈ ಸಂಧರ್ಭದಲ್ಲಿ ಗಸ್ತು ಅರಣ್ಯ ಪಾಲಕ ಜಯಚಂದ್ರ ಗೌಡ,ರವಿ ಕುಮಾರ್, ಕೆ.ಸಿ.ಡಿ.ಸಿ ಸಿಬ್ಬಂದಿ ಶೇಖರ,ಆಲಂಕಾರು ಗ್ರಾ.ಪಂ ಉಪಾಧ್ಯಕ್ಷೆ ರೂಪಾಶ್ರೀ ಪಟ್ಟೆ,ಗ್ರಾ.ಪಂ ಸದಸ್ಯರಾದ ಶ್ವೇತ ಕುಮಾರ್,ವಾರಿಜಾ,ಶಾರದಾ, ಶೌರ್ಯ ತಂಡದ ಅಧ್ಯಕ್ಷ ಕೇಶವ,ಸಂಯೋಜಕಿ ಸವಿತಾ ಸೇರಿದಂತೆ ಶೌರ್ಯ ತಂಡದ ಪದಾಧಿಕಾರಿಗಳು ಹಾಗು ಸದಸ್ಯರು, ಆಲಂಕಾರು ದ.ಕ ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ನೆಕ್ಕರೆ ಸೇರಿದಂತೆ ಗ್ರಾ.ಪಂ ಸಿಬ್ಬಂದಿ ಗಳು ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂದಾಜು 150 ಗಿಡ ಆಲಂಕಾರಿನ ಪರಿಸರದಲ್ಲಿ ಗಿಡ ನೆಟ್ಟು ವನಮಹೋತ್ಸವ ಆಚರಿಸಿದರು.

LEAVE A REPLY

Please enter your comment!
Please enter your name here