ಕೆಯ್ಯೂರು: ಆಟೋ ರಿಕ್ಷಾ ಡಿಕ್ಕಿ – ಶಾಲಾ ಬಾಲಕನಿಗೆ ತೀವ್ರ ಗಾಯ

0

ಪುತ್ತೂರು: ಶಾಲಾ ಬಸ್ಸಿಗಾಗಿ ಕಾಯುತ್ತಿದ್ದ ಬಾಲಕನಿಗೆ ಆಟೋ ರಿಕ್ಷಾವೊಂದು ಡಿಕ್ಕಿಯಾಗಿದ್ದು ಬಾಲಕ ತೀವ್ರ ಗಾಯಗೊಂಡಿರುವ ಘಟನೆ ಕೆಯ್ಯೂರು ಶಾಲಾ ಬಳಿ ಜು.3 ರಂದು ನಡೆದ ಬಗ್ಗೆ ವರದಿಯಾಗಿದೆ.

ನರಿಮೊಗ್ರು ಸಾಂದೀಪನಿ ಶಾಲೆಯ ವಿದ್ಯಾರ್ಥಿಯಾಗಿರುವ ಬಾಲಕ ದಿಗಂತ್ ಬೆಳಿಗ್ಗೆ 8.30ರ ಸುಮಾರಿಗೆ ಕೆಯ್ಯೂರು ಶಾಲೆಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಧರ್ಮಪಾಲ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ರಿಕ್ಷಾ ಡಿಕ್ಕಿಯಾಗಿತ್ತು. ಆ ಸಮಯ ರಿಕ್ಷಾ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದಾಗಿ ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾ ಡಿಕ್ಕಿಯಾದ ಪರಿಣಾಮ ದಿಗಂತ್ ಅವರ ತಲೆ, ಕಾಲಿಗೆ ತೀವ್ರ ಗಾಯವಾಗಿದ್ದು ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಿಕ್ಷಾ ಚಾಲಕ ಧರ್ಮಪಾಲ ಹಾಗೂ ಅದರಲ್ಲಿದ್ದ ಪಳ್ಳತ್ತಡ್ಕದ ಸುನಂದಾ ಎಂಬವರಿಗೂ ಗಾಯವಾಗಿದೆ.ಗಾಯಾಳು ಸುನಂದಾ ಅವರು ನೀಡಿರುವ ದೂರಿನ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here