ಕುರಿಯ ಕಾಂಗ್ರೆಸ್ ಕಚೇರಿಗೆ ಶಾಸಕರ ಭೇಟಿ, ಅಭಿನಂದನೆ

0

ಪುತ್ತೂರು: ಕುರಿಯ ಗ್ರಾಮ ಕಾಂಗ್ರೆಸ್ ಕಚೇರಿಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದರು. ಕಚೇರಿಗೆ ಭೇಟಿ ನೀಡಿದ ಶಾಸಕರನ್ನು ಕಾರ್ಯಕರ್ತರು ಅಭಿನಂದಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಉಪಸ್ಥಿತರಿದ್ದರು.


ಈ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್ ಬೂಡಿಯಾರ್ ಪುರುಷೋತ್ತಮ ರೈ ಗ್ರಾಮದಲ್ಲಿ ಕಾಂಗ್ರೆಸ್ ಗಟ್ಟಿಗೊಳಿಸಲು ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮವಹಿಸಿ ಕೆಲಸ ಮಾಡಿದ್ದು ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಯಪ್ರಕಾಶ್ ರೈ ಮಲಾರ್, ಗ್ರಾ.ಪಂ ಸದಸ್ಯ ಯಾಕೂಬ್, ಶಾಲಿನಿ ರೈ ಏಳ್ನಾಡುಗುತ್ತು, ಪದ್ಮಾವತಿ ರೈ ಮಲಾರ್, ನಾಗರಾಜ ರೈ ಬಳ್ಳಮಜಲು, ಅಬೂಬಕ್ಕರ್ ಮಲಾರ್ ಅಜಲಾಡಿ, ಕರೀಂ ಗಡಾಜೆ, ಅಯೂಬ್ ಗಡಾಜೆ, ಅಶ್ವಥ್ ಗೌಡ ಕುರಿಯ, ಹನೀಫ್ ಅಜಲಾಡಿ, ಉಮೇಶ್ ರೈ ಅಜಲಾಡಿ, ಚಂದ್ರಶೇಖರ ಟೈಲರ್, ಇಬ್ರಾಹಿಂ ನೆಕ್ಕರೆ, ಮುಸ್ಥಫಾ ಇಡಬೆಟ್ದು, ಜಬ್ಬಾರ್ ಸಂಪ್ಯ, ಕರುಣಾಕರ ನಾಯ್ಕ್, ಕೃಷ್ಣಪ್ಪ ಮೊಗೇರ, ಅಶೋಕ್ ನಾಯ್ಕ ಬಳ್ಲಮಜಲು, ಮೋಂಟ ಬಾಕುಡ, ಬಶೀರ್ ಓಟೆತ್ತಿಮಾರ್, ಸಲಾಂ ಅಜಲಾಡಿ, ಇಬ್ರಾಹಿಂ, ಕಲಂದರ್, ಪಕ್ರುಂಞಿ ಅಜಲಾಡಿ, ಮಮ್ಮು ಅಜ್ಜಿಕಟ್ಟೆ, ಇಲ್ಯಾಸ್ ಅಜಲಡಿ, ಇಮಾಂಸ, ಅಬ್ದುಲ್ ಆಸಿಫ್, ಇಸ್ಮಾಯಿಲ್ ಡಿಂಬ್ರಿ, ಸುಂದರ ಓಟೆತ್ತಿಮಾರ್, ರವೀ ಓಟೆತ್ತಿಮಾರ್, ಫೈರೋಝ್, ಉಸ್ಮಾನ್ ಕುರಿಯ, ಸುರೇಶ್ ಬಳ್ಲಮಜಲು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here