ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟದ ಅಧೀನದಲ್ಲಿ ಹತ್ತು ಜನರ ನೂತನ `ಹರ್ಷ ಸ್ವಸಾಯ ಸಂಘ’ ಉದ್ಘಾಟನೆಗೊಂಡಿತು. ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕೆಮ್ಮಿಂಜ ವಲಯ ಮೇಲ್ವಿಚಾರಕರಾದ ಪುಷ್ಪಲತಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಸೇವಾ ಪ್ರತಿನಿಧಿ ರೇಖಾ ರೈ ಹಾಗೂ ಮುಂಡೂರು ಗ್ರಾ.ಪಂ ಸದಸ್ಯೆ ಕಮಲ ದಾಖಲಾತಿ ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ಹರೀಶ್ ಎಸ್ ಮತ್ತು ಸಂಯೋಜಕರಾಗಿ ಅಖಿಲ್ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾದ ಆದಿಶ್ರೀ, ಪ್ರತೀಕ್ಷಾ ಎನ್ ಅಕ್ಷಿತಾ ಎನ್, ಯಮುನಾ, ಹೇಮಾವತಿ, ಪೂರ್ಣಿಮಾ, ಹರ್ಷಿತ್ ಕುಮಾರ ಎನ್, ಅವಿನಾಶ್ ಉಪಸ್ಥಿತರಿದ್ದರು.