ಭಾರೀ ಮಳೆ ಅನಾಹುತ- ಅರಿಯಡ್ಕದ ಕೊಂಬರಡ್ಕದಲ್ಲಿ ಧರೆ ಕುಸಿತ-ಅಪಾಯದಲ್ಲಿ ಮನೆ

0

ಪುತ್ತೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂಬರಡ್ಕದಲ್ಲಿ ಗಿರಿಧರ ಪೂಜಾರಿ ಎಂಬವರ ಮನೆಯ ಬದಿಯ ಧರೆ ಕುಸಿತಗೊಂಡಿದ್ದು ಮನೆ ಅಪಾಯದ ಸ್ಥಿತಿಯಲ್ಲಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ವಿಪತ್ತು ಕಾರ್ಯಾಚರಣೆ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಮಿತಿ ತಂಡದ ಅಧ್ಯಕ್ಷ, ಗ್ರಾಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ವಿಪತ್ತು ತಂಡದ ನೊಡೆಲ್ ಅಧಿಕಾರಿ ಪ್ರಸನ್ನ ಹೆಬ್ಬಾರ್, ವಾರ್ಡ್ ಸಮಿತಿ ಸದಸ್ಯರುಗಳಾದ ರಾಜೇಶ್ ಮಣಿಯಾಣಿ, ಉಷಾರೇಖಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ಕುಮಾರಿ, ಗ್ರಾಮ ಆಡಳಿತ ಅಧಿಕಾರಿ ಗೋಪಿನಾಥ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here