ಬೆಳ್ತಂಗಡಿಯ ರಿಕ್ಷಾಚಾಲಕ ಬನ್ನೂರು ನಿವಾಸಿ ಹೃದಯಾಘಾತದಿಂದ ನಿಧನ

0

ಪುತ್ತೂರು: ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಪುತ್ತೂರು ಬನ್ನೂರು ನಿವಾಸಿ ಶೇಖರ್ ಬಂಗೇರ(48ವ) ರವರು ಜು.4 ರಂದು ಹೃದಯಾಘಾತದಿಂದ ನಿಧನರಾದರು. ಶೇಖರ್ ಬಂಗೇರ ಅವರು ಎಳೆ ವಯಸ್ಸಿನಲ್ಲೇ ಬೆಳ್ತಂಗಡಿಯ ಅಜ್ಜಿ ಮನೆಯಲ್ಲಿದ್ದು ಬಳಿಕ ಅಲ್ಲೆ ಆಟೋ ರಿಕ್ಷಾ ಚಾಲಕರಾಗಿ ಜೀವನ ನಡೆಸುತ್ತಿದ್ದರು. ಇತ್ತೇಚೆಗೆ ಅನಾರೋಗ್ಯದಿಂದ ಅವರು ಬನ್ನೂರು ಮನೆಯಲ್ಲಿದ್ದರು. ಜು.4 ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ತಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ ಚೆನ್ನಮ್ಮ, ಸಹೋದರ ಪುತ್ತೂರು ಎಪಿಎಂಸಿ ವಾಹನ ಚಾಲಕರಾಗಿರುವ ಉಮೇಶ್ ಬಂಗೇರ ಮತ್ತು 5 ಮಂದಿ ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here