ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದಿಂದ ಸ್ವಾಮಿ ವಿವೇಕಾನಂದ ಸಂಸ್ಮರಣೆ

0

ಪುತ್ತೂರು: ಕೌಡಿಚ್ಚಾರು ವಿವೇಕಾನಂದ ಯುವಕ ವೃಂದದ ವತಿಯಿಂದ ಸ್ವಾಮಿ ವಿವೇಕಾನಂದರು ಇಹಲೋಕ ತ್ಯಜಿಸಿದ ದಿನವನ್ನು ಸ್ಮರಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಿಯಡ್ಕ ಇದರ ಮಾಜಿ ಅದ್ಯಕ್ಷ ಮೋನಪ್ಪ ಕುಲಾಲ್ ಪಾದಲಾಡಿ ರವರು ದೀಪ ಬೆಳಗಿಸಿ, ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವಕ ವೃಂದದ ಪ್ರಧಾನ ಕಾರ್ಯದರ್ಶಿ ಪ್ರತೀಕ್ ಪೂಜಾರಿ ಆಕಾಯಿ ಹಾಗೂ ಗೌರವಾಧ್ಯಕ್ಷ ಬಾಲಕೃಷ್ಣ ಕುಲಾಲ್ ಕೌಡಿಚ್ಚಾರುರವರು, ವಿವೇಕಾನಂದರ ತತ್ವ ಸಿದ್ಧಾಂತಗಳ ಬಗ್ಗೆ ಮಾತಾಡಿದರು.


ಈ ಸಂದರ್ಭದಲ್ಲಿ ಯುವಕ ವೃಂದದ ಅಧ್ಯಕ್ಷ ಉದಯ ಕುಮಾರ್ ಆಕಾಯಿ, ಮಾಜಿ ಉಪಾಧ್ಯಕ್ಷ ಮುಕುಂದ ನಾಯ್ಕ ದೇವುಮೂಲೆ, ಸದಸ್ಯರಾದ ಜಯಪ್ರಕಾಶ್ ಜೆ. ಪಿ ಕುತ್ಯಾಡಿ, ಗೋಪಾಲಕೃಷ್ಣ ಮಣಿಯಾಣಿ ಪಾದಲಾಡಿ, ಬಾಲಕೃಷ್ಣ ರೈ ಬಳ್ಳಿಕಾನ, ನವೀನ್ ಕರ್ಕೇರ ಮಾಣಿಯಡ್ಕ, ನಿಖಿತ್ ಕುಲಾಲ್. ಉಪಸ್ಥಿತರಿದ್ದರು.ಗೌರವ ಸಲಹೆಗಾರ ದೀಪಕ್ ಕುಲಾಲ್ ಆಕಾಯಿ ವಂದಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಚರಣ್ ರಾಜ್ ಎಂ ಡಿ ಹೊಸಗದ್ದೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here