ಸ್ಯಾಕ್ಸೋಫೋನ್ ವಾದಕ ಮೂಡಾಯೂರು ಶ್ರೀಧರ ದೇವಾಡಿಗರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಚಿಕ್ಕಮುಡ್ನೂರು ಗ್ರಾಮದ ದಿ.ಚಂದ್ರಾವತಿ ಹಾಗೂ ದಿ.ಬಾಬು ಸೇರಿಗಾರರವರ ಪುತ್ರ ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ ರವರಿಗೆ ಶ್ರದ್ಧಾಂಜಲಿ ಸಭೆ ಜು.12 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಚಂದ್ರಶೇಖರ ದೇವಾಡಿಗ ಕೆಮ್ಮಾಯಿರವರು ನುಡಿನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪತ್ನಿ ವಾರಿಜಾ, ಪುತ್ರರಾದ ಮನೋಜ್ ದೇವಾಡಿಗ ಮೂಡಾಯೂರು, ಮನೋಹರ ದೇವಾಡಿಗ ಮೂಡಾಯೂರು,‌ ಸೊಸೆ ಸಂಗೀತ ಎಸ್,ಮೊಮ್ಮಗ ವೃಷಿನ್‌ ಎಂ ದೇವಾಡಿಗ, ಪುತ್ರಿ ಪ್ರತಿಭಾ, ಅಳಿಯ ಸಂದೀಪ್ ದೇವಾಡಿಗ ಅರಿಯಡ್ಕ, ತ್ರಿಶಿಕಾ ದೇವಾಡಿಗ ಅರಿಯಡ್ಕ, ಸಹೋದರರು, ಸಹೋದರಿಯರು, ನಾದಿನಿಯರು, ಬಾವಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here