ಪಾಪೆತ್ತಡ್ಕ ಮದ್ರಸದಲ್ಲಿ ಮುಅಲ್ಲಿಂ ಡೇ ಆಚರಣೆ

0

ಪುತ್ತೂರು : ಅಲ್ ಮದ್ರಸತುಲ್ ಹಾದಿಯ್ಯ ಮದರಸ ಪಾಪೆತ್ತಡ್ಕ ಇದರ ಸಭಾಂಗಣದಲ್ಲಿ ಜು.16 ರಂದು ಬೆಳಿಗ್ಗೆ ಮುಅಲ್ಲಿಂ ಡೇ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಮಸೀದಿಯ ಖತೀಬ್ ಉಸ್ತಾದರಾದ ಯೂಸುಫ್ ಫೈಝಿ ತ್ಯಾಗರಾಜೆ ಯವರು ಪ್ರಾರ್ಥನೆ ಗೈದು ಮುಅಲ್ಲಿಂ ಡೇ ಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಮದರಸದ ಮುಅಲ್ಲಿಂ ಉಸ್ತಾದರಾದ ಅಬ್ದುರ್ರಹ್ಮಾನ್ ಮೌಲವಿ ಕುಂಬ್ರ ಸ್ವಾಗತ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಉಮರ್ ಶಾಫಿ ಪಾಪೆತ್ತಡ್ಕ, ಜೂತೆ ಕಾರ್ಯದರ್ಶಿ ಅಶ್ರಫ್ ಆನಾಜೆ, ಮಾಜಿ ಕೋಶಾಧಿಕಾರಿ ಇಬ್ರಾಹಿಂ ಬೊಳ್ಳಮೆ, ಜಮಾಅತ್ ಪದಾಧಿಕಾರಿಗಳಾದ ಇಸ್ಮಾಯಿಲ್ ಬೂಳ್ಳಮೆ, ಸಮೀರ್ ಪಾಪೆತ್ತಡ್ಕ, ರಶೀದ್ ಪಾಪತ್ತಡ್ಕ, ಲತೀಫ್ ಪಾಪೆತ್ತಡ್ಕ, ಸಿರಾಜ್ ನರಿಮೊಗರು, ಸಮೂನ್ ಪಾಪೆತ್ತಡ್ಕ ಹಾಗೂ ಮದರಸ ವಿಧ್ಯಾರ್ಥಿಗಳು ರಕ್ಷಕರು ಉಪಸ್ಥಿತರಿದ್ದರು.

ಬಳಿಕ ಕೂಟು ಪ್ರಾರ್ಥನೆ, ಖಬರ್ ಝಿಯಾರತ್ ನಡೆಯಿತು. ಕೊನೆಯಲ್ಲಿ ಸಿಹಿ ತಿಂಡಿ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here