ದ.ಕ., ಉಡುಪಿ ವಕೀಲರ ವೇದಿಕೆಯ ಅಧ್ಯಕ್ಷರಾಗಿ ಪ್ರವೀಣ್ ಮುಗುಳಿ,‌ ಖಜಾಂಜಿಯಾಗಿ ಮೋಹಿತ್ ಗೌಡ ಆಯ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಕೀಲರ ವೇದಿಕೆ ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಪ್ರವೀಣ್ ಮುಗುಳಿ ಮತ್ತು ಖಜಾಂಜಿಯಾಗಿ ಮೋಹಿತ್ ಕುಮಾರ್ ಗೌಡ ಆಯ್ಕೆಯಾಗಿದ್ದಾರೆ. ಇವರೀರ್ವರೂ ಪುತ್ತೂರು ಮೂಲದವರಾಗಿದ್ದಾರೆ. ಬೆಂಗಳೂರಿನ‌ ಪರಾಗ್ ಹೊಟೇಲಿನಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.‌

ಅಧ್ಯಕ್ಷರಾಗಿ ಪ್ರವೀಣ್ ಮುಗುಳಿ, ಕಾರ್ಯದರ್ಶಿಯಾಗಿ ಶೈಲ ರಮೇಶ್ ಬೆಳ್ತಂಗಡಿ, ಖಜಾಂಜಿಯಾಗಿ ಮೋಹಿತ್ ಕುಮಾರ್ ಗೌಡ, ಉಪಾಧ್ಯಕ್ಷರಾಗಿ ಸಂಧ್ಯಾ ಪ್ರಭು, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಪಾದ್ಯಾಣ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರವೀಣ್ ಮುಗುಳಿಯವರು‌ ಪುತ್ತೂರು ವಿಟ್ಲದವರಾಗಿದ್ದು ಖಜಾಂಜಿಯಾಗಿ ಆಯ್ಕೆಯಾಗಿರುವ ಮೋಹಿತ್ ಗೌಡ ಅವರು ಕೊಳ್ತಿಗೆಯ ಪಾಂಬಾರು ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here