ಸುಳ್ಯಪದವು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಅರುಣ್ ಕುಮಾರ್ ಅಯ್ಕೆ

0

ಬಡಗನ್ನೂರುಃ ಸುಳ್ಯಪದವು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲಾ ನಿರ್ದೇಶಕರುಗಳ ಅವಿರೋಧ ಆಯ್ಕೆ ನಡೆದಿದೆ.

ಜು 4 ರಂದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಪುತ್ತೂರು ಉಪವಿಭಾಗದ ಶೋಭಾ ಎನ್.ಎಸ್.ರವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಅರುಣ್ ಕುಮಾರ್, ಉಪಾಧ್ಯಕ್ಷರಾಗಿ ರುಕ್ಮಾಂಗದ ಆಚಾರ್ಯ ಹಾಗೂ ನಿರ್ದೇಶಕರುಗಳಾಗಿ   ರಾಘವ ಕೆ, ಜಗದೀಶ್ ರೈ ಬಿ, ಸುಬ್ರಹ್ಮಣ್ಯ ಭಟ್ ಬಿ ಸೂರ್ಯನಾರಾಯಣ ಭಟ್ ಬಿ, ನಾರಾಯಣ ನಾಯ್ಕ ಕೆ,  ಜಗನ್ನಾಥ ರೈ ಬಿ, ವಿನಾಯ ಕುಮಾರ್ ಟಿ.ಎಸ್, ರಾಮಾಕಾಂತಿ ಬಿ ಇವರುಗಳು ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿ ವಿನಾಯ ಕುಮಾರ್ ಕನ್ನಡ್ಕ,  ಸಹಕರಿಸಿದರು.

LEAVE A REPLY

Please enter your comment!
Please enter your name here