ನಿಡ್ಪಳ್ಳಿ ಗ್ರಾ ಪಂ ಉಪಚುನಾವಣೆ ಕಾಂಗ್ರೆಸ್ ಎಸ್ಸಿ ಘಟಕದಿಂದ ಪ್ರಚಾರ

0

ಪುತ್ತೂರು: ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎನ್.ಸತೀಶ್ ಶೆಟ್ಟಿ ಅವರ ಗೆಲುವಿಗಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ವತಿಯಿಂದ ಪ್ರಚಾರ ಕಾರ್ಯ ನಡೆಸಲಾಯಿತು.

ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಅವರ ನೇತೃತ್ವದಲ್ಲಿ ದೊಂಬಟೆಗಿರಿ ಕಾಲೋನಿ ಮನೆ ಮನೆಗೆ ಭೇಟಿ ನೀಡಿ ಸತೀಶ್ ಶೆಟ್ಟಿ ಪರ ಮತಯಾಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಬಾಬು ರೈ ಕೋಟೆ, ಆಶೀಫ್ ತಂಬುತಡ್ಕ, ಪುಷ್ಪಾವತಿ ಮುಕ್ವೆ, ರವಿ ಮಣಿಯ, ಸುಮತಿ ಎನ್ ನಿಡ್ಪಳ್ಳಿ, ಲತಾ ಎನ್ ನಿಡ್ಪಳ್ಳಿ, ಶ್ರೀನಿವಾಸ ಪಾಣಾಜೆ, ತುಕಾರಾಮ ಡಿ, ವಸಂತ ಜಿ, ಜಯರಾಮ ಡಿ, ಹರೀಶ್ ಡಿ, ಕೃಷ್ಣಪ್ಪ ಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here