ಅರಿಯಡ್ಕ: ಶ್ರೀ ಕೃಷ್ಣ ಭಜನಾ ಮಂದಿರ ಸಭಾಭವನದ ಬಲಬದಿಯಲ್ಲಿ ಮಣ್ಣು ಕುಸಿತ

0

ಅರಿಯಡ್ಕ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡದ ಹಿಂದಿನ ಭಾಗ , ಶ್ರೀ ಕೃಷ್ಣ ಭಜನಾ ಮಂದಿರ ಸಭಾಭವನದ ಬಲಬದಿಯಲ್ಲಿ ಮಣ್ಣು ಕುಸಿತ ಉಂಟಾಗಿದೆ.ಇದರಿಂದ ವಾಣಿಜ್ಯ ಕಟ್ಟಡದ ಅಂಗಡಿ ಮುಂಗಟ್ಟುಗಳಿಗೆ ನೀರು ಹರಿದು ತೊಂದರೆ ಉಂಟಾಗಿದೆ. ಗ್ರಾಮಪಂಚಾಯತ್ ಅಧ್ಯಕ್ಷೆ ಸೌಮ್ಯಾ ಬಾಲಸುಬ್ರಹ್ಮಣ್ಯ , ಉಪಾಧ್ಯಕ್ಷರಾದ ಸಂತೋಷ್ ಮಣಿಯಾಣಿ ಕುತ್ಯಾಡಿ,ಪಿ.ಡಿ.ಓ ಪದ್ಮಾ ಕುಮಾರಿ, ಸದಸ್ಯ ಹರೀಶ್ ರೈ ಜಾರುತ್ತಾರು, ಕಾರ್ಯದರ್ಶಿ ಶಿವರಾಮ ಮೂಲ್ಯ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತು ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಸಮೀಪ ಕುಂಬ್ರ-ಸುಳ್ಯಪದವು ವಿದ್ಯುತ್ ಎಚ್.ಟಿ ಲೈನ್, ಬಳ್ಳಿಕಾನ , ಮತ್ತು ಕುತ್ಯಾಡಿಯಲ್ಲಿ ಎಲ್.ಟಿ ಲೈನ್ ಗೆ ಮರಬಿದ್ದು ವಿದ್ಯುತ್ ಸಂಪರ್ಕ ವ್ಯತ್ಯಾಯ ಗೊಂಡಿದೆ.ಮೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ.

LEAVE A REPLY

Please enter your comment!
Please enter your name here