ಪುತ್ತೂರು: ಪತ್ನಿಗೆ ಚೂರಿ ಇರಿತ ಆರೋಪ – ಪತಿಯ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ತವರು ಮನೆಯಲ್ಲಿದ್ದ ಪತ್ನಿಗೆ ಆಕೆಯ ಪತಿ ಚೂರಿಯಿಂದ ಇರಿತಗೊಳಿಸಿರುವ ಘಟನೆ ಆ.6 ರಂದು ರಾತ್ರಿ ಪುತ್ತೂರು ನೆಲ್ಲಿಕಟ್ಟೆ ಸಮೀಪದ ಬ್ರಹ್ಮನಗರದಲ್ಲಿ ನಡೆದಿದೆ.


ಬ್ರಹ್ಮನಗರದ ಮಹಿಳೆಯೊಬ್ಬರು ಹಲ್ಲೆಗೊಳಗಾದವರು. 6 ವರ್ಷದ ಹಿಂದೆ ಮದುವೆಯಾಗಿದ್ದು, ಮದುವೆಯಾಗಿ 2-3 ವರ್ಷಗಳಿಂದ ಆಕೆಯ ಪತಿ ಪ್ರಶಾಂತ್ ಮಾನಸಿಕ ಕಿರುಕುಳ ನೀಡುತ್ತಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಲಾಗಿದ್ದರೂ ಪತಿ ತೊಂದರೆ ನೀಡುವುದನ್ನು ಮುಂದುವರಿಸಿದ್ದಾರೆ. ಆ.6 ರಂದು ರಾತ್ರಿ ಮಹಿಳೆ ತನ್ನ ತಾಯಿ ಮನೆಯಲ್ಲಿ ಇರುವಾಗ ಅಲ್ಲಿಗೆ ಬಂದ ಪತಿ ಪ್ರಶಾಂತ್ ಅವ್ಯಾಚವಾಗಿ ಬೈದು ಚೂರಿಯಿಂದ ಕೈಗೆ ತಿವಿದು ಜೀವ ಬೆದರಿಕೆ ಒಡ್ಡಿರುವುರುವುದಾಗಿ ಆರೋಪಿಸಲಾಗಿದೆ.

ಘಟನೆಯಿಂದ ಗಾಯಾಳು ಮಹಿಳೆ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆಯ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಪ್ರಶಾಂತ್ ಅವರ ವಿರುದ್ಧ ಸೆಕ್ಷನ್ 498(ಎ), 504, 324, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here