ಕರ್ವೇಲ್ ಶಾಲಾ ನಿವೃತ್ತಮುಖ್ಯ ಗುರು ಯಶೋದಾ ಕೆ ನಿಧನ

0

ಪುತ್ತೂರು:ಪೆರ್ನೆ ಬಿಳಿಯೂರು ಕಳೆಂಜಕೆಳಗಿನ ಮನೆ ನಿವಾಸಿ, ಕರ್ವೇಲು ಶಾಲೆಯ ನಿವೃತ್ತ ಮುಖ್ಯಗುರು ಯಶೋದಾ ಕೆ(೭೨ವ) ಎಂಬವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.೭ರಂದು ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಯಲ್ಲಿ ನಿಧನರಾದರು.

ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಯಶೋದಾರವರು ಭಡ್ತಿ ಹೊಂದಿ ಕರ್ವೇಲ್ ಶಾಲೆಯಲ್ಲಿ ಮುಖ್ಯಗುರುವಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.ಮೃತರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ನಿವೃತ್ತ ಅಧಿಕಾರಿಯಾಗಿರುವ ಪತಿ ಡಿ.ಚಂದಪ್ಪ ಪೂಜಾರಿ,ಪುತ್ರರಾದ ಮಂಗಳೂರು ನವಬಂದರ್ ಮಂಡಳಿಯಲ್ಲಿ ಸಹಾಯಕ ಅಭ್ಯಂತರರಾಗಿ ಸೇವೆ ಸಲ್ಲಿಸುತ್ತಿರುವ ಧನಂಜಯ ಕೆ.ಸಿ., ಬೆಂಗಳೂರಿನ ವೈದ್ಯರಾಗಿರುವ ಡಾ.ಅನಿಲ್ ಕುಮಾರ್ ಕೆ.ಸಿ.,ಬೆಂಗಳೂರಿನಲ್ಲಿ ಮೆಕ್ಯಾನಿಕ್ ಇಂಜಿನಿಯರ್ ಆಗಿರುವ ಭರತೇಶ್ ಕೆ.ಸಿ ಮತ್ತು ಸೊಸೆಯಂದಿರು ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here