ಪರ್ಪುಂಜ: ಶ್ರೀ ಕೃಷ್ಣ ಜನ್ಮಾಷ್ಠಮಿ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಪರ್ಪುಂಜ ಸ್ನೇಹ ಯುವಕ ಮಂಡಲ ಹಾಗೂ ಸ್ನೇಹ ಮಹಿಳಾ ಮಂಡಲ ಇದರ ಜಂಟಿ ಆಶ್ರಯದಲ್ಲಿ ಸೆ.6 ರಂದು ಪರ್ಪುಂಜ ರಾಮಜಾಲು ಗರಡಿ ವಠಾರದಲ್ಲಿ ನಡೆಯುವ 19 ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಶಿವ ಕೃಪಾ ಆಡಿಟೋರಿಯಂ ಮಾಲಕ ಹರಿಹರ ಕೋಡಿಬೈಲ್ ಇವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸ್ನೇಹ ಯುವಕ ಮಂಡಲದ ಗೌರವ ಅಧ್ಯಕ್ಷ ಪ್ರೇಮ್ ರಾಜ್ ರೈ ಪರ್ಪುಂಜ ಹಾಗೂ ಗೌರವ ಸಲಹೆಗಾರರಾದ ಮಿತ್ರದಾಸ ರೈ ಡೆಕ್ಕಲ ಹಾಗೂ ರಾಜೇಶ್ ರೈ ಪರ್ಪುಂಜ ಹಾಗೂ ಸ್ನೇಹ ಯುವಕ ಮಂಡಲದ ಅಧ್ಯಕ್ಷ ವಿಪಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಗೌಡ, ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ರೈ, ಕಾರ್ಯದರ್ಶಿ ಪವಿತ್ರ, ಸದಸ್ಯರುಗಳಾದ ವಿನೋದ್ ಮಗಿರೆ, ರಾಜೇಶ್ ಪಿದಪಟ್ಲ, ರಾಕೇಶ್ ರೈ, ಗಿರೀಶ್ ಗೌಡ, ದಿನೇಶ್ ಗೌಡ, ಗಗನ್ ರೈ, ಸುಜಿತ್ ರೈ, ಯಶ್ವಿತ್ ಪೂಜಾರಿ, ಶರತ್ ಪೂಜಾರಿ, ಭರತ್ ಪೂಜಾರಿ, ಸುರೇಶ್ ಪೂಜಾರಿ, ರಂಜಿತ್ ಪೂಜಾರಿ, ಧನುಷ್ ರೈ, ಸಾವಿತ್ರಿ, ರೋಹಿಣಿ, ಮೀನಾಕ್ಷಿ, ಶ್ರೀಮತಿ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here