ಪೆರ್ನೆ: ಸಂಚಾರಿ ಶವ ದಹನ ಪೆಟ್ಟಿಗೆ ಕೊಡುಗೆ

0

ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಸಾರ್ವಜನಿಕ ಅನುಕೂಲಕ್ಕಾಗಿ ಸಂಚಾರಿ ಶವ ದಹನ ಪೆಟ್ಟಿಗೆಯನ್ನು ಪೆರ್ನೆ ಗ್ರಾ.ಪಂ.ಗೆ ಹಸ್ತಾಂತರಿಸಲಾಯಿತು.


ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳನ್ನೊಳಗೊಂಡ ಪೆರ್ನೆ ಗ್ರಾ.ಪಂ.ನಲ್ಲಿ ವ್ಯವಸ್ಥಿತ ಸ್ಮಶಾನದ ಕೊರತೆಯಿದ್ದು, ಶವ ದಹನಕ್ಕೆ ಸ್ಥಳೀಯರಿಗೆ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು ಸ್ವಂತ ಅನುದಾನದಡಿ ಸಂಚಾರಿ ಶವ ದಹನ ಪೆಟ್ಟಿಗೆಯನ್ನು ಖರೀದಿಸಿ ಸಾರ್ವಜನಿಕ ಉಪಯೋಗಕ್ಕೆಂದು ಸಂಘದ ಅಧ್ಯಕ್ಷ ಎಸ್. ತೋಯಾಜಾಕ್ಷ ಶೆಟ್ಟಿಯವರು ಪೆರ್ನೆ ಗ್ರಾ.ಪಂ. ಅಧ್ಯಕ್ಷ ಸುನೀಲ್ ನೆಲ್ಸನ್ ಪಿಂಟೋ ಅವರಿಗೆ ಹಸ್ತಾಂತರಿಸಿದರು.


ಈ ಸಂದರ್ಭ ಸಂಘದ ಉಪಾಧ್ಯಕ್ಷ ತನಿಯಪ್ಪ ಪೂಜಾರಿ, ನಿರ್ದೆಶಕರಾದ ಡಾ. ರಾಜಗೋಪಾಲ್ ಶರ್ಮಾ, ನೀಲಪ್ಪ ಗೌಡ, ಲಕ್ಷ್ಮಣ ನಾಯ್ಕ, ಜಯಲಕ್ಷ್ಮಿ, ರೇವತಿ, ವಿಶ್ವನಾಥ ಶೆಟ್ಟಿ, ಬಶೀರ್, ಕೆ.ಮಹಮ್ಮದ್ ಶರೀಫ್, ಚೆನ್ನ ಕೇಶವ, ಬೇಬಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಡಿ., ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ, ಕಾರ್ಯದರ್ಶಿ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here