ಇಚ್ಲಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ

0

ಅಧ್ಯಕ್ಷ: ಸುಮನ್ ಆರ್.ಕೆ., ಕಾರ್ಯದರ್ಶಿ-ಸಚಿನ್ ನೇರ್ಲ, ಕೋಶಾಧಿಕಾರಿ: ದಿನಕರ ಹೊಸಮನೆ

ನೆಲ್ಯಾಡಿ: ಇಚ್ಲಂಪಾಡಿ 11ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಮನ್ ಆರ್.ಕೆ.ಕೆರ್ನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ನೇರ್ಲ ಹಾಗೂ ಕೋಶಾಧಿಕಾರಿಯಾಗಿ ದಿನಕರ ಹೊಸಮನೆ ಆಯ್ಕೆಯಾಗಿದ್ದಾರೆ.


ಇಚ್ಲಂಪಾಡಿ ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಹರೀಶ್ ಅಲೆಕ್ಕಿ, ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ನೇರ್ಲ, ಸದಸ್ಯರಾಗಿ ಕೀರ್ತನ್ ಕುಂಞಿಮಾರು, ಮೋಹನ್ ಮುಚ್ಚಿಲ, ಶರಣ್ ಬಿಜೇರು, ಸುಧೀಂದ್ರ ಬಾಕಿಜಾಲು ಆಯ್ಕೆಗೊಂಡರು. ವಿವಿಧ ಉಪಸಮಿತಿಗೆ ಸಂಚಾಲಕರನ್ನು ನೇಮಕ ಮಾಡಲಾಯಿತು. ಆರ್ಥಿಕ-ಹರೀಶ್ ನೇರ್ಲ(ನೇರ್ಲ ಸಂಕೀರ್ಣ), ಪೂಜಾ-ಪೂವಪ್ಪ ಪುಳಿತ್ತಡಿ. ಭೋಜನಾ-ಶಾಂತಾರಾಮ ಬಿಜೇರು, ಪ್ರಚಾರ-ಯಶವಂತ ಒಡ್ಯತ್ತಡ್ಕ, ಶೋಭಾಯಾತ್ರೆ-ಹರೀಶ್ ನೇರ್ಲ(ಮಾತೃಶ್ರಿ ಔಟ್‌ಫಿಟ್), ಸ್ವಯಂ ಸೇವಕ-ಅಕ್ಷಯ್ ನೇರ್ಲ, ನೀರಾವರಿ-ಉಮೇಶ್ ಮುಚ್ಚಿಲ, ಸ್ವಚ್ಛತಾ-ತನಿಯಪ್ಪ ಮೊಂಟೆತ್ತಡ್ಕ, ಭಜನೆ-ಮೋನಪ್ಪ ನಿಡ್ಯಡ್ಕ, ಸಭಾ ಕಾರ್ಯಕ್ರಮ-ರಾಧಾಕೃಷ್ಣ ಕೆರ್ನಡ್ಕ, ಸಾಂಸ್ಕೃತಿಕ-ವಸಂತ ಬಿಜೇರು, ಗ್ರಾಮ ಅಲಂಕಾರ-ಸುರೇಶ್ ಬಿಜೇರು ಹಾಗೂ ಅಲಂಕಾರ ಸಮಿತಿ-ಅಧ್ಯಕ್ಷರು, ಸದಸ್ಯರು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಇಚ್ಲಂಪಾಡಿ ಒಕ್ಕೂಟ ಇವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here