ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ತಾಳಮದ್ದಳೆ

0

ಪುತ್ತೂರು: ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಯತಿವರ್ಯರಾದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಆ.13 ಯಕ್ಷಗಾನ ತಾಳಮದ್ದಳೆ ಭೂಮಿಂಜಯ ನಡೆಸಿಕೊಟ್ಟರು.


ಹಿಮ್ಮೇಳದಲ್ಲಿ ಭಾಗವತರಾಗಿ ಸಿಂಚನಾ ಮೂಡುಕೋಡಿ ಮತ್ತು ರಚನಾ ಚಿದ್ಗಲ್, ಚೆಂಡೆ ಮದ್ದಳೆಯಲ್ಲಿ ಶ್ರೀಕುಮಾರ್ ಪೆರ್ಲ, ಲಕ್ಷ್ಮೀಶ ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಭೂಮಿಂಜಯ), ಜಯಲಕ್ಷ್ಮಿ ವಿ ಭಟ್(ಬೃಹನ್ನಳೆ), ಪ್ರೇಮಾ ಕಿಶೋರ್( ಗೋಪಾಲಕ), ಶುಭಾ ಪಿ ಆಚಾರ್ಯ(ಉತ್ತರೆ), ವಿನಯಾ ಜಿ ಕೇಕುಣ್ಣಾಯ ಸೈರಂದ್ರಿಯಾಗಿ ಪಾತ್ರ ನಿರ್ವಹಣೆ ಮಾಡಿದರು. ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಫಲ, ಮಂತ್ರಾಕ್ಷತೆಯನ್ನಿತ್ತು, ಶಾಲು ಹೊದಿಸಿ ಕಲಾವಿದರನ್ನು ಹರಸಿದರು. ವಾಸುದೇವ ಭಟ್ ಶ್ರೀನಿಕೇತನ ಕಾರ್ಯಕ್ರಮ ಪ್ರಾಯೋಜಿಸಿದ್ದರು. ಹೀರಾ ಉದಯ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here