ಅಜಲಡ್ಕ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ 

0

ಪುತ್ತೂರು: ಅಜಲಡ್ಕ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ  ಧ್ವಜ ಕಟ್ಟೆಯ ಸ್ಥಾಪಕರಾದ  ಹರಿಪ್ರಸಾದ್ ಶೆಟ್ಟಿ ಇಂತ್ರುಮೂಲೆ ಯವರು ಧ್ವಜಾರೋಹಣಗೈದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸರೋಜಾ ಮಾಧವ ರೈ, ಒಳಮೊಗ್ರು ಪಂಚಾಯತ್ ಮಾಜಿ ಅಧ್ಯಕ್ಷ ಯತಿರಾಜ್ ರೈ, ಒಳಮೊಗ್ರು ಪಂಚಾಯತ್ ಮಾಜಿ ಸದಸ್ಯರಾದ ಮಾಧವ ಅಜಲಡ್ಕ, ವಿಘ್ನೇಶ್ವರ ಯುವಕ ಮಂಡಲದ ಅಧ್ಯಕ್ಷ ವಿಠಲ ಪೂಜಾರಿ ಕಾರ್ಯದರ್ಶಿಯಾದ ಉದ್ಭವ್ ಹಾಗೂ  ಊರಿನ ಹಿರಿಯ ಕಿರಿಯ ಗಣ್ಯರು ಉಪಸ್ಥಿತರಿದ್ದರು. ದರ್ಬೆತಡ್ಕ ಶಾಲಾ ಮಕ್ಕಳ ಮೆರವಣಿಗೆ ನಡೆಯಿತು. ಅಂಗನವಾಡಿ ಕೇಂದ್ರ ಹಾಗೂ ಈಶ್ವರ ನಾಯ್ಕ್ ರವರ ವತಿಯಿಂದ ಸಿಹಿ ತಿಂಡಿ ಹಾಗೂ  ಉಪಹಾರದ ವ್ಯವಸ್ಥೆ ಹಾಗೂ ಮಾಲ್ಟ್ ನ ವ್ಯವಸ್ಥೆ ಯನ್ನು ವಿಠ್ಠಲ ಪೂಜಾರಿಯವರು ಮಾಡಿದರು ಅಂಗನವಾಡಿ ಕಾರ್ಯಕರ್ತೆ ಸೀತಾ ಕುಮಾರಿ ಹಾಗೂ ಸಹಾಯಕಿ ನಳಿನಿ ಕಾರ್ಯಕ್ರಮ ನಿರ್ವಹಿಸಿದರು. ವಿಘ್ನೇಶ್ವರ ಯುವಕ ಮಂಡಲದ ಮಾಜಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಅರಂತ್ನಡ್ಕ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here