ಕೆಯ್ಯೂರು : ಪಲ್ಲತಡ್ಕ ಶ್ರೀ ಹೊಸಮ್ಮ ದೇವಸ್ಥಾನಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ಪುತ್ತೂರು : ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದರು.ಆ.17ರಂದು ಭೇಟಿ ನೀಡಿ ಶ್ರೀ ದೇವಿಗೆ ಸಂಕ್ರಾಂತಿಯ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಗಂಧ ಪ್ರಸಾದವನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ದೈವಸ್ಥಾನದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಎಸ್.ಬಿ.ಜಯರಾಮ ರೈ ,ಜಯಂತ ನಡುಬೈಲು ಹಾಗೂ ಪಾಲ್ತಾಡಿಯ ಬಿಜೆಪಿ ಪ್ರಮುಖರಾದ ಸಂಜೀವ ಗೌಡ ಪಾಲ್ತಾಡಿ, ಕೊಳ್ತಿಗೆ ಸಿಎ ಬ್ಯಾಂಕ್ ನಿರ್ದೇಶಕ ಶ್ರೀಧರ ಗೌಡ ಅಂಗಡಿಹಿತ್ಲು ,ಮಹೇಶ್ ಕುಮಾರ್ ಮೇನಾಲ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here