ವಾಲಿಬಾಲ್‌ ಪಂದ್ಯಾಟ: ಹಿರಿಯ ಪ್ರಾಥಮಿಕ ಶಾಲೆ ಪಟ್ಟೆಯ ಬಾಲಕರ ತಂಡ ತಾಲೂಕು ಮಟ್ಟಕ್ಕೆ

0

ಬಡಗನ್ನೂರುಃ  ಸರಸ್ವತಿ ವಿದ್ಯಾ ಮಂದಿರ ನರಿಮೊಗರು ಇಲ್ಲಿ ನಡೆದ ಸವಣೂರು ವಲಯದ ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಪಟ್ಟೆಯ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.ತಂಡದಲ್ಲಿ ತನ್ವಿತ್, ಯಶ್ವಿತ್ ಕೆ,ಸಾಥ್ವಿ ಎಂ  ಧನುಷ್ ಎಂ,  ದೀಪಕ್ ನಾಯ್ಕ, ಪ್ರತ್ವಿಶ್, ದಿವಿತ್ ಎಸ್ ಪಿ, ನಿಶ್ಚಿತ್ , ಚರಣ್, ನಿಕ್ಷಿತ್, ಚಿರಾಗ್ ಕೆ, ಪ್ರತೀಕ್ ಸಿ ಎಚ್  ಕ್ರೀಡಾಪಟುಗಳಾಗಿ ಭಾಗವಹಿಸಿದ್ದರು .ಪಟ್ಟೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ ತರಬೇತು ನೀಡಿದ್ದರು. ಕೆ ರಾಮಚಂದ್ರಪ್ಪ ಸಹಕರಿಸಿದ್ದರು.

LEAVE A REPLY

Please enter your comment!
Please enter your name here