ನಾಳೆ(ಆ.21) ಪರ್ಪುಂಜ ರಾಮಜಾಲು ಗರಡಿಯಲ್ಲಿ ನಾಗರ ಪಂಚಮಿ ಆಚರಣೆ

0

ಪುತ್ತೂರು: ರಾಮ ಲಕ್ಷ್ಮಣರು ಅಡ್ಡಾಡಿದ ಪ್ರದೇಶ, ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರು ನಡೆದಾಡಿದ ಪುಣ್ಯ ಭೂಮಿ ಎಂದೇ ಕರೆಸಿಕೊಂಡಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲುವಿನಲ್ಲಿ ಕಾರಣಿಕತೆ ಮೆರೆಯುತ್ತಿರುವ ಶ್ರೀ ಬ್ರಹ್ಮಬೈದೇರ್ಕಳ ಗರಡಿಯಲ್ಲಿ ಆ.21 ರಂದು ನಾಗರ ಪಂಚಮಿ ಆಚರಣೆ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಶ್ರೀ ನಾಗದೇವರಿಗೆ ಸಿಯಾಳಭಿಷೇಕ, ಹಾಲಿನ ಅಭಿಷೇಕ ನಡೆಯಲಿದೆ. ಗ್ರಾಮಸ್ಥರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ನಾಗದೇವರ, ಬ್ರಹ್ಮಬೈದೆರ್ಕಳ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here