ಸಾಮೆತ್ತಡ್ಕ ಯುವಕ ಮಂಡಲ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ:ರೋಶನ್ ರೆಬೆಲ್ಲೋ,ಉಪಾಧ್ಯಕ್ಷ:ಪ್ರಸಾದ್ ಕುಮಾರ್,ಕಾರ್ಯದರ್ಶಿ:ಲೋಹಿತ್ ಗೌಡ,ಕೋಶಾಧಿಕಾರಿ:ಕವನ್ ನಾಯ್ಕ್

ಪುತ್ತೂರು: ಸಾಮೆತ್ತಡ್ಕ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸಾನೆತ್ತಡ್ಕ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಉದ್ಯಮಿ ರೋಶನ್ ರೆಬೆಲ್ಲೋ, ಕಾರ್ಯದರ್ಶಿಯಾಗಿ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಲೋಹಿತ್ ಗೌಡ, ಉಪಾಧ್ಯಕ್ಷರಾಗಿ ಕೆ.ಎಸ್.ಆರ್.ಟಿ.ಸಿ ಉದ್ಯೋಗಿ ಪ್ರಸಾದ್ ಕುಮಾರ್, ಕೋಶಾಧಿಕಾಯಾಗಿ ನ್ಯಾಯವಾದಿ ಕವನ್ ನಾಯ್ಕ್, ಜೊತೆ ಕಾರ್ಯದರ್ಶಿಯಾಗಿ ಉದ್ಯಮಿ ಇಂದೀವರ್ ಭಟ್, ಕ್ರೀಡಾ ಕಾರ್ಯದರ್ಶಿಯಾಗಿ ಚಂದ್ರಶೇಖರ್ ರೈ ಆಯ್ಕೆಯಾದರು. ಅಲ್ಲದೆ ಮಾರ್ಗದರ್ಶಕರಾಗಿ ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ಗೌರವಾಧ್ಯಕ್ಷರಾಗಿ ಉದ್ಯಮಿ ಸೂರಜ್ ಶೆಟ್ಟಿ , ಸಂಚಾಲಕರಾಗಿ ಕಲ್ಲಾರೆ ನವಜೀವನ್ ಫ್ಲವರ್ಸ್ ನ ಜೋನ್ ಪೀಟರ್ ಡಿ’ಸಿಲ್ವ(ವಲ್ಲು) ಹಾಗೂ ದೀಪಕ್ ಮಲ್ಯರವರನ್ನು ನೇಮಿಸಲಾಯಿತು.

LEAVE A REPLY

Please enter your comment!
Please enter your name here