ಇಂದು(ಆ.21ಕ್ಕೆ) ಹಿಂಜಾವೇಯಿಂದ ದರ್ಬೆಯಲ್ಲಿ ಪ್ರತಿಭಟನೆ

0

ಪುತ್ತೂರು: ಹಿಂ.ಜಾ.ವೇ. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಸತೀಶ್ ದಾವಣೆಗೆರೆಯವರ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿ ಆ.21ರಂದು ಸಂಜೆ ಗಂಟೆ 6ಕ್ಕೆ ಪುತ್ತೂರು ದರ್ಬೆಯಲ್ಲಿ ಹಿಂದು ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಯಲಿದೆ.
ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಭಾಷಣವೆಂಬ ನೆಪವೊಡ್ಡಿ ಪೊಲೀಸರು ಅನಗತ್ಯ ಕೇಸ್ ದಾಖಲಿಸಿ ಸತೀಶ್ ದಾವಣೆಗೆರೆಯವರ ಮನಗೆ 4 ದಿನಗಳ ಬಳಿಕ ಮಧ್ಯರಾತ್ರಿ ಅಕ್ರಮ ಪ್ರವೇಶ ಮಾಡಿ ಮನೆಯವರನ್ನು ಬೆದರಿಸಿ ಕಾನೂನು ಬಾಹಿರವಾಗಿ ಬಂಧನ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ಪ್ರೇರಿತ ಅಧಿಕಾರಿಗಳ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ದರ್ಬೆ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆ ಪ್ರಮುಖರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here