ಆ.26: ಸವಣೂರು ರೈತ ಉತ್ಪಾದಕ ಕಂಪೆನಿ ವತಿಯಿಂದ ಷೇರು ಪತ್ರ ವಿತರಣೆ, ಅಡಿಕೆ ಕೃಷಿ ಕುರಿತು ಮಾಹಿತಿ, ಹೊಸ ಸದಸ್ಯರ ನೋಂದಾವಣೆ

0

ಸವಣೂರು: ಕಾಣಿಯೂರು ಸವಣೂರು ರೈತ ಉತ್ಪಾದಕ ಕಂಪೆನಿ ಲಿ. ಆಶ್ರಯದಲ್ಲಿ ಪಾಲ್ತಾಡಿ ಗ್ರಾಮದ ಸದಸ್ಯರಿಗೆ ಷೇರು ಪತ್ರ ವಿತರಣೆ, ಅಡಿಕೆ ಕೃಷಿಯ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ಹಾಗೂ ಹೊಸ ಸದಸ್ಯರ ನೋಂದಾವಣೆ ಆ.26ರಂದು ಬೆಳಿಗ್ಗೆ 10.30 ಕ್ಕೆ ಪಾಲ್ತಾಡಿ ಚೆನ್ನಾವರ ಶ್ರೀ ಉಳ್ಳಾಕುಲು ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.

ಕಂಪೆನಿಗೆ ಇನ್ನೂ ಸದಸ್ಯತನ ಪಡೆಯದ 15 ಸೆಂಟ್ಸ್ ಗಿಂತ ಹೆಚ್ಚಿನ ಜಮೀನು ಹೊಂದಿರುವ ಎಲ್ಲಾ ರೈತ ಬಾಂಧವರು ಆರ್ ಟಿಸಿ, ಆಧಾರ್, ಮೂರು ಫೋಟೊ, ಪಾನ್ ಕಾರ್ಡ್, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು 1500 ನಗದಿನೊಂದಿಗೆ ಸದಸ್ಯತನ ಪಡೆಯಬಹುದು. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವಂತೆ ರೈತ ಉತ್ಪಾದಕ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here