ಬಪ್ಪಳಿಗೆ ಕರ್ಕುಂಜದಲ್ಲಿ ಸ್ಕೂಟರ್, ಆಟೋ ರಿಕ್ಷಾ ಡಿಕ್ಕಿ

0

ಪುತ್ತೂರು: ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಬಪ್ಪಳಿಗೆ ಕರ್ಕುಂಜದಲ್ಲಿ ಆ.23ರಂದು ಸಂಜೆ ನಡೆದಿದೆ.
ಜೋಯಿಸ್ಟಾನ್ ಡಿಸೋಜ ಅವರು ಪುತ್ತೂರು ಕಡೆ ಚಲಾಯಿಸುತ್ತಿದ್ದ ಸ್ಕೂಟರ್ ಮತ್ತು ವಿರುದ್ಧ ಧಕ್ಕಿನಿಂದ ಜಾನ್ ಡಿಸೋಜ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾ ನಡುವೆ ಬಪ್ಪಳಿಗೆ ಕರ್ಕುಂಜ ಎಂಬಲ್ಲಿ ಅಪಘಾತ ಸಂಭವಿಸಿತ್ತು.

ಅಪಘಾತದಿಂದ ಸ್ಕೂಟರ್ ಸವಾರ ಬಲ್ನಾಡು ಪದವು ನಿವಾಸಿ ಜಾನ್ ಡಿ ಸೋಜ ಯಾನೆ ಜೆರ್ಮಿ ಡಿಸೋಜ ಅವರ ಪುತ್ರ ಜೋಯಿಸ್ಟಾನ್ ಡಿಸೋಜ ಅವರು ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here