ಸುಧಾಭರಣೀ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯದಲ್ಲಿ ಡಾ. ರಾಮಕಿರಣ್ ಚಿಕಿತ್ಸೆಗೆ ಲಭ್ಯ

0

ಪುತ್ತೂರು: ಬೊಳುವಾರು ಹೆಗ್ಡೆ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಧಾಭರಣೀ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯದಲ್ಲಿ, ತಜ್ಞ ಡಾ.ರಾಮಕಿರಣ್ (ಎಂ.ಡಿ.,ಆಯು) ಚಿಕಿತ್ಸೆಗೆ ಸದಾ ಲಭ್ಯರಿದ್ದಾರೆ.

ಕಳೆದ ಕೆಲ ಸಮಯಗಳಿಂದ ಇಲ್ಲಿನ ಕೆ ಎಸ್ ಆರ್ ಟಿ ಸಿ ನಿಲ್ದಾಣ ಮುಂಭಾಗದ ಕೇಶವ ಶ್ರೀ ಸಂಕೀರ್ಣದಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಸುಧಾಭರಣೀ ಆಯುರ್ವೇದ ಚಿಕಿತ್ಸಾಲಯ ಮೂಲಕ ಅವರು ಚಿಕಿತ್ಸೆ ನೀಡುತ್ತಿದರು. ಆದರೆ, ಇನ್ನು ಮುಂದೆ ಪೂರ್ಣಕಾಲಿಕ ನೆಲೆಯಲ್ಲಿ ಬೊಳುವಾರಿನ ಚಿಕಿತ್ಸಾಲಯದಲ್ಲಿ ಸೇವೆಗೆ ಲಭ್ಯರಿರುತ್ತಾರೆ.
ಇಲ್ಲಿ ಮುಖ್ಯವಾಗಿ ಪಂಚಕರ್ಮ ಚಿಕಿತ್ಸೆ, ಸಂಧಿವಾತ, ಡಿಸ್ಕ್ ಸಮಸ್ಯೆ, ವೆರಿಕೊಸ್ ವೆನ್, ಸೊರಿಯಸಿಸ್, ಚರ್ಮರೋಗ, ಡಯಾಬಿಟಿಸ್, ಮೈಗ್ರೇನ್‌ ಹಾಗೂ ಮೊಡವೆ ಸಮಸ್ಯೆ ಗಳಿಗೆ ಚಿಕಿತ್ಸೆಯೂ ಸಿಗಲಿದೆ.

ವೆಲ್ನೆಸ್ ಕೋರ್ಸ್, ಸೌಂದರ್ಯ ವರ್ಧಕ, ಸ್ತ್ರೀ ರೋಗಗಳು ಮತ್ತು ಡಯಾಟ್ ಮೊಡಿಫೀಕೆಶನ್ ಅಡ್ವೈಸ್ ಜೊತೆಗೆ ಪುಷ್ಯ ನಕ್ಷತ್ರ ದಿನ ಸ್ವರ್ಣ ಬಿಂದು ಪ್ರಾಶನ ಕೂಡ ಇರುತ್ತದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 8147102824 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here