ಜನ ಸಂಘದ ನಾಯಕ ಅರುವಾರ ಬಾಳಿಕೆ ದಿ. ಶ್ಯಾಮಪ್ರಸಾದ್ ರೈ ಮನವಳಿಕೆ ನಿಧನ

0

ಆಲಂಕಾರು: ಪೆರಾಬೆ ಗ್ರಾಮದ ಮನವಳಿಕೆಗುತ್ತು ದಿ.ಕರಿಯಪ್ಪ ರೈಯವರ ಪುತ್ರ,ದಿ.ಉಮೇಶ ರೈ ಮನವಳಿಕೆಯವರ ಸಹೋದರ ಅರುವಾರ ಬಾಳಿಕೆ ದಿ. ಶ್ಯಾಮಪ್ರಸಾದ್ ರೈ(73.ವ) ಮನವಳಿಕೆಯವರು ಆ.28ರಂದು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಜನಸಂಘದ ನಾಯಕನಾಗಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿದ್ದರು.

ಅಯೋಧ್ಯೆಯ ಕರಸೇವಕರಾಗಿ ತುರ್ತುಪರಿಸ್ಥಿತಿ ಸಂಧರ್ಭದಲ್ಲಿ ಸೆರೆಮನೆವಾಸ, ಅಮರನಾಥ ಯಾತ್ರೆ ಹಾಗೂ ಇನ್ನಿತರ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತನ್ನನು ತಾನು ತೊಡಗಿಸಿಕೊಂಡು ರಾಜ್ಯ ಬಿಜೆಪಿ ನಾಯಕರ ನಿಕಟ ಸಂಪರ್ಕವನ್ನು ಹೊಂದಿದ್ದರು. ಮೃತರ ಪತ್ನಿ ಗೀತಾ, ಮಗಳು ಉಜ್ವಲ, ಅಳಿಯ ರವೀಂದ್ರ ರೈ ಯವರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಾಂತ್ವನ ನೀಡಿದರು.

LEAVE A REPLY

Please enter your comment!
Please enter your name here